ಲಕ್ಷದೀಪೋತ್ಸವ ಧರ್ಮಸ್ಥಳದಲ್ಲಿ

ರಚನೆ: ವೀರೇಂದ್ರ ಬೇಗೂರು ಹಾಸನ

ಕ್ಷದೀಪೋತ್ಸವ ಧರ್ಮಸ್ಥಳದಲ್ಲಿ

ಶ್ರೀಮಂಜುನಾಥನ ಸನ್ನಿಧಿಯಲ್ಲಿ

ಅಂಧಕಾರವು ಕಳೆಯುವುದಿಲ್ಲಿ

ಜ್ಞಾನ ಜ್ಯೋತಿಯು ಬೆಳಗುವುದಿಲ್ಲಿ||ಪ||

ನ್ಯಾಯ ದೀಕ್ಷೆಯು ಅವನಡಿಯಲ್ಲಿ

ಜ್ಞಾನ ದೀಕ್ಷೆಯು ಶಿವಸ್ಥಳದಲ್ಲಿ

ಮೈತ್ರಿಭಾವವು ಜನಮನದಲ್ಲಿ

ಧರ್ಮಸ್ಥಳ ಮಹಾಪೀಠದಲ್ಲಿ||೧||

ಧರ್ಮಸಮನ್ವಯ ಕಾಣುವುದಿಲ್ಲಿ

ಬಾಹುಬಲಿಯ ಸನ್ನಿಧಿಯಲ್ಲಿ

ಧರ್ಮರಕ್ಷೆಯು ನಿತ್ಯವೂ ಇಲ್ಲಿ

ಧರ್ಮದೇವತೆಯ ಶ್ರೀರಕ್ಷೆಯಲ್ಲಿ ||೨||

ನೊಂದಜನರು ಬೇಡಿಬರಲು

ಮಂಜುನಾಥನ ಸನ್ನಿಧಿಯಲ್ಲಿ

ಅಭಯವ ನೀಡಿ ಸಲಹುವರು

ಹೆಗ್ಗಡೆಯವರು ಶ್ರೀ ಕ್ಷೇತ್ರದಲ್ಲಿ||೩||

ಧರ್ಮಸೇವೆಯು ನಡೆಯುವುದು

ಶ್ರೀಧರ್ಮಸ್ಥಳ ಮಹಾವೈಭವದಲ್ಲಿ

ಭಕ್ತರ ಬಾಳು ಬೆಳಗುವುದು

ಶ್ರೀ ಕ್ಷೇತ್ರದ ಮಹಾಉತ್ಸವದಲ್ಲಿ||೪||

Related Articles

ಪ್ರತಿಕ್ರಿಯೆ ನೀಡಿ

Latest Articles