ರಾಯರ ಮಠದ ಸಿಬ್ಬಂದಿ ಜೆ. ನರಸಿಂಹ ಮೂರ್ತಾಚಾರ್ ದೈವಾಧೀನ

ಬೆಂಗಳೂರು: ಸುಮಾರು 40 ವರ್ಷಗಳಿಂದ ಜಯನಗರ 5ನೇ ಬ್ಲಾಕ್‌ನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀರಾಯರ ಸೇವೆಯನ್ನು ಸಲ್ಲಿಸಿದ್ದ ಜೆ. ನರಸಿಂಹಮೂರ್ತಾಚಾರ್ ಡಿ.19ರಂದು ದೈವಾಧೀನರಾದರು.

ಜೆ. ನರಸಿಂಹಮೂರ್ತಾಚಾರ್ ಆಧುನಿಕ ದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರು 3 ಸಾವಿರಕ್ಕೂ ಮಿಗಿಲಾಗಿ ರಾಯರ ಹಾಡುಗಳನ್ನು ರಚಿಸಿ ಐದಾರು ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ.

ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಶ್ರೀ ಹರಿ ವಾಯುಗುರುಗಳಲ್ಲಿ ಪ್ರಾರ್ಥಿಸಿದರು ಎಂದು ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles

ಸಾಕ್ಷಾತ್ಕರ ವಾಟ್ಸಪ್‌ ಗ್ರೂಪ್‌ಗೆ ಸೇರಿ