ಶರಣು ಕಾರ್ತಿಕೇಯ

*ರೂಪಾಪ್ರಸಾದ ಕೋಡಿಂಬಳ

ಕುಕ್ಕೆಯಲ್ಲಿ ನೆಲೆಸಿಹ ಸುಬ್ರಹ್ಮಣ್ಯನೇ
ಭಕ್ತರನ್ನು ಪೊರೆಯೊ ನೀ ಮಹಾಮಹಿಮನೇ
ವರವ ನೀಡಿ ಪಾಲಿಸೆಯ ಕರುಣಾಕರನೇ
ಹರನಸುತ ಪೊರೆಯೊ ಎನ್ನ ಗಿರಿಜೆಲೋಲನೇ||

ಹಾಲನೆರೆದು ಪೂಜಿಸುವೆ ಭಕ್ತಿಯಿಂದಲಿ
ಹಾವು ಎನದೆ ದೇವನೆನುವೆ ಸತ್ಯದಿಂದಲಿ
ಆಶ್ಲೇಷ ಪೂಜೆಗೈದು ಶರಣು ಎನ್ನುವೆ
ದೋಷಗಳ ಪರಿಹರಿಸು ಎಂದು ಬೇಡುವೆ ||

ಕುಮಾರಧಾರೆ ನದಿಯಲ್ಲಿ ಮಿಂದು ಬರುವೆನು
ಕುಮಾರನೀನು ಒಲಿದುಬಂದು ಹರಸು ಎನ್ನನು
ಮಡೆಯ ಸ್ನಾನವನ್ನು ಮಾಡಿ ನಿನ್ನ ನಮಿಸುವೆ
ಉರುಳುಸೇವೆಯನ್ನು ಗೈದು ಸ್ಕಂದ ಭಜಿಸುವೆ||

ಚರ್ಮರೋಗಗಳನು ನೀನು ದೂರಮಾಡೆಯಾ
ಮರ್ಮವನ್ನು ಅರಿತೆಮಗೆ ಅಭಯ ನೀಡೆಯಾ
ಭವದ ಕಷ್ಟಗಳನು ಕಳೆಯೊ ಕಾರ್ತಿಕೇಯನೇ
ಭಯದ ಮನದ ಇಷ್ಟವರಿತು ಪೊರೆಯೊ ಸ್ಕಂದನೇ||


Related Articles

ಪ್ರತಿಕ್ರಿಯೆ ನೀಡಿ

Latest Articles