ಬಾಳೆಹಣ್ಣಿನ ಸೇವೆಗೆ ಒಲಿವ ಭಗವಂತನಿಗೆ ಬಾಳೆಹಣ್ಣಿನ ಅಲಂಕಾರ

ಉಡುಪಿ ತಾಲ್ಲೂಕು ಪೆರ್ಡೂರು ಬಳಿಯ ಕದಳಿಪ್ರಿಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವರಿಗೆ ಬಾಳೆ ಹಣ್ಣಿನ ಅಲಂಕಾರ ಮಾಡಲಾಗಿತ್ತು. ಬಾಳೆಹಣ್ಣಿಗೊಲಿವ ಭಗವಂತನೆಂದೇ ಖ್ಯಾತಿ ಪಡೆದ ಶ್ರೀ ಅನಂತ ಪದ್ಮನಾಭ ಸ್ವಾಮಿಗೆ ಒಂದು ಸಾವಿರ ವರ್ಷಗಳಿಂದಲೂ ಬಾಳೆಹಣ್ಣಿನ ಸೇವೆ ನಡೆಯುತ್ತಿದೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಈ ದೇವಸ್ಥಾನದಲ್ಲಿ ಬಾಳೆಹಣ್ಣಿನ ಹರಕೆ ಸೇವೆ ಮಾಡಿಸುವುದು ವಿಶೇಷ.
ಒಂದು ವರ್ಷದಲ್ಲಿ ಬರುವ ೧೨ ಸಂಕ್ರಮಣ ದಿನದಂದು ವಿಶೇಷ ಪೂಜೆ ನಡೆಯುತ್ತದೆ. ಅದರಲ್ಲೂ ಸಿಂಹ ಸಂಕ್ರಮಣದAದು ಭಕ್ತಸಾಗರವೇ ನೆರೆದಿರುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles