ಜ. 18ರಂದು ‘ತ್ರಿವೇಣಿ ಮನ ಮಂಥನ’ ಕೃತಿ ಬಿಡುಗಡೆ

ಬೆಂಗಳೂರು: ಜಯನಗರ 4ನೇ ಬ್ಲಾಕ್‌ನಲ್ಲಿರುವ ವಿಜಯ ಪದವಿಪೂರ್ವ ಕಾಲೇಜು, ಐಸಿರಿ ಪ್ರಕಾಶನದ ಸಹಯೋಗದಲ್ಲಿ ಡಾ. ಅರ್ಚನಾ ಆರ್ ಅವರ ವಿಮರ್ಶಾಕೃತಿ “ತ್ರಿವೇಣಿ ಮನ ಮಂಥನ’ದ ಬಿಡುಗಡೆ ಕಾರ್ಯಕ್ರಮ ಜ.18ರಂದು ಮಧ್ಯಾಹ್ನ1.30ಕ್ಕೆ ವಿಜಯ ಪದವಿಪೂರ್ವ ಕಾಲೇಜಿನ ರಾಮಸ್ವಾಮಿ ಸಭಾಂಗಣದಲ್ಲಿ ನಡೆಯಲಿದೆ.
ಡಾ. ಪದ್ಮಿನಿ ನಾಗರಾಜು (ಲೇಖಕಿ, ಸದಸ್ಯರು ಕನ್ನಡ ಸಲಹಾ ಸಮಿತಿ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ) ಅವರು ಕೃತಿ ಬಿಡುಗಡೆ ಮಾಡಲಿದ್ದು, ವಿಜಯ ಪದವಿಪೂರ್ವ ಕಾಲೇಜಿನ ಡೀನ್ ಡಾ.ಅನಂತ ಕೆ.ಅತ್ರೆ ಅಧ್ಯಕ್ಷತೆ ವಹಿಸುವರು.
ಬಿಎಚ್.ಎಸ್. ಉನ್ನತ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಎನ್.ಬಿ.ಭಟ್, ವಿಜಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್.ಚಂದ್ರಶೇಖರ್, ತ್ರಿವೇಣಿ ಅವರ ಪುತ್ರಿ ಮೀರಾಶಂಕರ್, ಪ್ರಕಾಶಕರು, ಐಸಿರಿ ಪ್ರಕಾಶನದ ಮಂಜುನಾಥ ಪಾಳ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles