ಶಂಕರಪುರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ತ್ಯಾಗರಾಜ ಸ್ವಾಮಿ ಆರಾಧನಾ ಮಹೋತ್ಸವ

ಬೆಂಗಳೂರು: ಸದ್ಗುರು ಶ್ರೀ ತ್ಯಾಗಬ್ರಹ್ಮ ಆರಾಧನಾ ಕೈಂಕರ್ಯ ಟ್ರಸ್ಟ್‌ ಜ.29 ರಿಂದ ಫೆ.2ರವರೆಗೆ ತ್ಯಾಗರಾಜ ಸ್ವಾಮಿ ಅವರ ಆರಾಧನಾ ಮಹೋತ್ಸವವನ್ನು ಶಂಕರಪುರ ರಸ್ತೆಯಲ್ಲಿರುವ ಶೃಂಗೇರಿ ಶಂಕರ ಮಠದಲ್ಲಿ ಹಮ್ಮಿಕೊಂಡಿದೆ.

ಶುಕ್ರವಾರ ಸಂಜೆ 4.30ಕ್ಕೆ ವಿದ್ವಾನ್ ಎಸ್‌.ಪಿ. ಪಳನಿವೇಲು ಹಾಗೂ ವಿದ್ವಾನ್ ಆರ್. ಪ್ರಭಾವತಿ ಪಳನಿವೇಲು ವೃಂದದಿಂದ ನಾದಸ್ವರ ನಡೆಯಲಿದೆ. ರಾತ್ರಿ 10 ಗಂಟೆಯವರೆಗೂ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶನಿವಾರದಿಂದ ಸಂಜೆ 5 ಗಂಟೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲ ಕಾರ್ಯಕ್ರಮಗಳು ಆಕಾಶವಾಣಿಯ ಅಮೃತವರ್ಷಿಣಿ ಎಫ್‌ಎಂ ಹಾಗೂ ಶಂಕರ ಟಿ.ವಿಯಲ್ಲಿ ನೇರ ಪ್ರಸಾರವಾಗಲಿವೆ ಎಂದು ಮಠದ ಆಡಳಿತಾಧಿಕಾರಿ ವಿ.ಆರ್. ಗೌರಿಶಂಕರ್ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles