ಶ್ರೀರಾಯರ ಸನ್ನಿಧಿಯಲ್ಲಿ ದಾಸವಾಣಿ ಕಾರ್ಯಕ್ರಮ

ಬೆಂಗಳೂರು: ಪರಮಪೂಜ್ಯ ಡಾ||ಶ್ರೀ108ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಫೆಬ್ರವರಿ ತಿಂಗಳಿನಿಂದ ಪ್ರತಿ ಗುರುವಾರ ಸಂಜೆ 7.30 ರಿಂದ 9.30 ರವರೆಗೆ ಸಾಂಸ್ಕೃತಿಕ ದಾಸವಾಣಿ ಕಾರ್ಯಕ್ರಮಗಳು ನೆರವೇರಲಿವೆ.

ರಾಯರ ಸನ್ನಿಧಿಯಲ್ಲಿ ಸೇವೆ ಸಲ್ಲಿಸಲು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀರಾಯರ ಸನ್ನಿಧಿಯಲ್ಲಿ “ದಾಸವಾಣಿ” ಸೇವೆ ಸಲ್ಲಿಸಲು ಹೆಚ್ಚಿನ ಮಾಹಿತಿಗಾಗಿ ನಂದಕಿಶೋರ್ ಆಚಾರ್ಯ ಹಾಗೂ ಸುಧೀಂದ್ರ ದೇಸಾಯಿ ಇವರನ್ನು ಸಂಪರ್ಕಿಸಬಹುದು: 8660349906/ 9980400535.

ವಿ ಸೂಚನೆ- ಗಾಯನ ಸೇವಾ ಮಾಡಲು ಆಸಕ್ತಿ ಇರುವವರು ಅಪರೋಕ್ಷ ಜ್ಞಾನಿಗಳ ಅಂಕಿತವಿರುವ  ಕೃತಿಗಳು ಮಾತ್ರ ಪ್ರಸ್ತುತ ಪಡಿಸಬೇಕು,ಕಲಾವಿದರು ತಾವು ಹಾಡಿರುವ ಒಂದು ಅಥವಾ ಎರಡು ದಾಸರ ಪದಗಳ ವೀಡಿಯೋಗಳನ್ನು ಮೇಲಿನ ವಾಟ್ಸಪ್ ನಂಬರ್ ಗಳಿಗೆ ಕಳಿಸಬೇಕು.

ReplyForward

Related Articles

ಪ್ರತಿಕ್ರಿಯೆ ನೀಡಿ

Latest Articles