ಗಾಂಧೀ ಶಾಂತಿ ಪ್ರತಿಷ್ಠಾನದ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರಾಗಿ ಜೀರಿಗೆ ಲೋಕೇಶ್

ಬೆಂಗಳೂರು ಗಾಂಧೀ ಶಾಂತಿ ಪ್ರತಿಷ್ಠಾನವು 2020-2023 ರ ವರೆಗಿನ 3 ವರ್ಷದ ಅವಧಿಗೆ ಅಧ್ಯಕ್ಷರಾಗಿ ಹಿರಿಯ ಗಾಂಧಿ ಚಿಂತಕ ಜೀರಿಗೆ ಲೋಕೇಶ್, ಗೌರವ ಉಪಾಧ್ಯಕ್ಷರಾಗಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ವಿಶ್ರಾಂತ ಕುಲಪತಿಗಳು, ಕರ್ನಾಟಕ ಸಂಸ್ಕöÈತ ವಿಶ್ವವಿದ್ಯಾಲಯ, ಗೌರವ ಕಾರ್ಯದರ್ಶಿಗಳಾಗಿ ಡಾ.ಸತ್ಯಮಂಗಲ ಮಹಾದೇವ, ಕವಿಗಳು ಮತ್ತು ಸಂಶೋಧಕರು, ಗೌರವ ಖಜಾಂಚಿಗಳಾಗಿ ಡಾ.ರಾಮಲಿಂಗೇಶ್ವರ ಎಸ್.(ಸಿಸಿರಾ), ಸಾಂಸ್ಕೃತಿಕ ಸಂಘಟಕರು ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನಾಡೋಜ ಡಾ. ವೂಡೇ ಪಿ.ಕೃಷ್ಣ ಅಧ್ಯಕ್ಷರು, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಪ್ರೊ.ಚಂದ್ರಿಕಾ ಪುರಾಣಿಕ್, ನಿವೃತ್ತ ಪ್ರಾಂಶುಪಾಲರು ಇವರು ಕಾರ್ಯಕಾರಿ ಸಮಿತಿ ಸದಸ್ಯರಾಗಿರುತ್ತಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles