ರಾಯರಮಠದ ಪಂಚಾಂಗ ವಿತರಣೆ

ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಮಂತ್ರಾಲಯ ಕ್ಷೇತ್ರದಲ್ಲಿ ಬಿಡುಗಡೆಯಾದ ಶ್ರೀ ಪ್ಲವನಾಮ ಸಂವತ್ಸರದ ಶ್ರೀ ರಾಯರ ಮಠದ ಪಂಚಾಂಗವು ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ದೊರೆಯಲಿದೆ.

ಬೆಂಗಳೂರು ನಗರದ ತಮ್ಮ ತಮ್ಮ ಟ್ರಸ್ಟಿನ ಶ್ರೀ ರಾಯರ ಮಠದದವರು ತಮ್ಮ ಕೋಟಾದಲ್ಲಿ ಇರತಕ್ಕಂತ ಪಂಚಾಂಗಗಳನ್ನು ಬೆಂಗಳೂರಿನ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರ ನಂಜನಗೂಡು ಶ್ರೀ ರಾಯರ ಮಠದಲ್ಲಿ ಮಾರ್ಚ್ 27, 28, 29 ಈ ಮೂರು ದಿನಗಳ ಕಾಲ ವಿತರಿಸಲಾಗುವುದು, ಸಮಯ ಬೆಳಗ್ಗೆ 9 ರಿಂದ 12, ಸಂಜೆ 5 ರಿಂದ 8 ರವರೆಗೆ ಎಂದು ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ- ಚಾಮರಾಜಪೇಟೆ ಶ್ರೀರಾಯರ ಮಠ-9341418890- 08026708642. ಜಯನಗರ ಶ್ರೀರಾಯರಮಠ-08022443962-9449133929- 9945429129- 8660349906

Related Articles

ಪ್ರತಿಕ್ರಿಯೆ ನೀಡಿ

Latest Articles