ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಹನುಮಜ್ಜಯಂತಿ

ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ “ಹನುಮ ಜಯಂತಿ” ಪ್ರಯುಕ್ತ ಮುಖ್ಯಪ್ರಾಣ ದೇವರಿಗೆ (ಆಂಜನೇಯಸ್ವಾಮಿಗೆ) ಜೇನುತುಪ್ಪದಿಂದ ವಾಯುಸ್ತುತಿ ಪುನಶ್ಚರಣೆ ಸಹಿತ ಮಧು ಅಭಿಷೇಕ ನೆರವೇರಿಸಲಾಯಿತು.

ಕೋವಿಡ್ ಕಾರಣದಿಂದ, ಶ್ರೀ ಮಠಕ್ಕೆ ಭಕ್ತರು ಆಗಮಿಸಲು ಆಗದೆ ಇರುವ ಕಾರಣ ಅರ್ಚಕರಿಂದ ಸೇವಾಕರ್ತರುಗಳ ಭಕ್ತರ ಹೆಸರುಗಳಿಂದ ಸಂಕಲ್ಪಿಸಿ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ “ಸತ್ಯನಾರಾಯಣ ವ್ರತ” ಪೂಜೆಯು ನೆರವೇರಿತು ಎಂದು ಪುರೋಹಿತರಾದ ಕಿಶೋರ್ ಆಚಾರ್ಯ ತಿಳಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles