ಬೆಂಗಳೂರಿನ ಇಸ್ಕಾನ್‌ನಲ್ಲಿ ನರಸಿಂಹ ಸ್ವಾಮಿ ಜಯಂತಿ

ಬೆಂಗಳೂರಿನ ಇಸ್ಕಾನ್‌ನಲ್ಲಿ ಮೇ 25 ರಂದು ನರಸಿಂಹ ಸ್ವಾಮಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಷ್ಣುವಿನ ವಿವಿಧ ಅವತಾರದಲ್ಲಿ ನರಸಿಂಹ ದೇವರ ಅವತಾರವೂ ಒಂದು. ಭಕ್ತ ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನ ರಕ್ಷಣೆಗೋಸ್ಕರ ‘ನರಸಿಂಹ’ ಅವತಾರವನ್ನು ತಾಳುತ್ತಾನೆ. ಈ ಸಾಂಕ್ರಾಮಿಕ ಸಮಯದಲ್ಲಿ ನಮ್ಮೆಲ್ಲರಿಗೂ ಕೂಡ ವಿಶೇಷವಾಗಿ ಆ ಭಗವಂತನ ರಕ್ಷಣೆ ಬೇಕೇ ಬೇಕು. ಹಾಗಾಗಿ ನಮ್ಮೆಲ್ಲರ ಒಳಿತಿಗಾಗಿ, ಲೋಕ ಕಲ್ಯಾಣಕ್ಕಾಗಿ ಇಸ್ಕಾನ್ ಬೆಂಗಳೂರು ಶ್ರೀ ನರಸಿಂಹ ಜಯಂತಿಯ ಶುಭ ಸಂದರ್ಭದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮ, ಅಭಿಷೇಕ, ಹೋಮ-ಹವನಗಳನ್ನು ಹಮ್ಮಿಕೊಳ್ಳಲಾಯಿತು. ಅದಷ್ಟೇ ಅಲ್ಲದೆ ಇಸ್ಕಾನ್ ದೇವಾಲಯದ ಭಕ್ತರೆಲ್ಲರೂ ಸೇರಿ  ಸಾಮೂಹಿಕವಾಗಿ ಶ್ರೀ ನರಸಿಂಹ ದೇವರ ಮಂತ್ರವನ್ನು  ಪಠಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles