ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಲಕ್ಷದೀಪೋತ್ಸವ

ಬೆಂಗಳೂರು: ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಲೋಕಕಲ್ಯಾಣಕ್ಕಾಗಿ ಪರಮಪೂಜ್ಯ ಶ್ರೀ108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀಸತ್ಯನಾರಾಯ ಣ ಪೂಜೆ, ಧಾತ್ರಿ ಹವನ, ಲಕ್ಷ್ಮೀನಾರಾಯಣಪೂಜೆ, ಮೇಘನಾ ಜಯಸಿಂಹ ವೃಂದದವರಿಂದ ದಾಸವಾಣಿ, ಹಾಗೂ ವಿಶೇಷವಾಗಿ ಸನ್ನಿಧಿಯಲ್ಲಿ ಸೇವಾಕರ್ತರುಗಳಿಂದ ಹಾಗೂ ಭಕ್ತರಿಂದ”ಲೋಕ ಕಲ್ಯಾಣ”ಕ್ಕಾಗಿ ಸಂಕಲ್ಪಿಸಿ ಪ್ರಾರ್ಥಿಸಿದರು.

ನೂರಾರು ಭಕ್ತಾದಿಗಳು ಶ್ರೀಮಠಕ್ಕೆ ಆಗಮಿಸಿ ದೀಪಗಳನ್ನು ಪ್ರಜ್ವಲಿಸಿ, ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಭಕ್ತರು ಹಾಗೂ ಶ್ರೀಮಠದ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಕಿಶೋರ್ ಆಚಾರ್ಯ ತಿಳಿಸಿದರು.

ಮೇಘನಾ ಜಯಸಿಂಹ ವೃಂದದವರಿಂದ ದಾಸವಾಣಿ.

Related Articles

ಪ್ರತಿಕ್ರಿಯೆ ನೀಡಿ

Latest Articles