ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯಿಂದ ಬರಹಗಳ ಆಹ್ವಾನ

ಗದಗ: ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಬರಹ, ವಚನ ಚಿಂತನ, ಅಧ್ಯಾತ್ಮ ಲೇಖನ, ಗೀತೆಗಳನ್ನು ಆಹ್ವಾನ ಮಾಡಲಾಗಿದೆ.

ಆಯ್ದ ಬರಹಗಳನ್ನು ಸೇರಿಸಿ ಸಂಕಲನ ಕೃತಿಯನ್ನು ಹೊರತರಲಾಗುತ್ತದೆ. ನೀವು ಒಬ್ಬ ಸಾಧಕರಾಗಿದ್ದರೆ ನಿಮ್ಮದೇ ಕಿರುಪರಿಚಯವನ್ನು ಕಳುಹಿಸಿಕೊಡಬಹುದು. ಅರ್ಹ ಸಾಧಕರನ್ನು ಗುರುತಿಸಿ ಪುಟ್ಟರಾಜರ ಹೆಸರಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಹೆಚ್ಚಿನ ಮಾಹಿತಿಗೆ ವೇ ಚನ್ನವೀರಸ್ವಾಮೀಜಿ ಸಂಸ್ಥಾನ ಹಿರೇಮಠ (ಕಡಣಿ) ಮೊಬೈಲ್ ಸಂಖ್ಯೆ 9886717732 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles