ಮಹಾಶಿವರಾತ್ರಿ ವಿಶೇಷ ಕಾರ್ಯಕ್ರಮ ಮಾ. 1 ರಂದು

ಬೆಂಗಳೂರು: ‘ಹರಿಕಥಾ ವಿದ್ವಾನ್’ ಕೀರ್ತಿಶೇಷ ಟಿ. ವಿ. ಗೋಪಿನಾಥದಾಸರ (ಸುಪ್ರಸಿದ್ಧ ಪ್ರಭಾತ ಕಲಾವಿದರು ಸಂಸ್ಥೆಯ ಸಂಸ್ಥಾಪಕರು) ಪುಣ್ಯಸ್ಮರಣೆಯಲ್ಲಿ ‘ಗೋಪಿನಾಥದಾಸ ನ್ಯಾಸ’ ಸಂಸ್ಥೆಯ ವತಿಯಿಂದ ಶಿವರಾತ್ರಿ ಪ್ರಯುಕ್ತ ಮಾರ್ಚ್ 1, ಮಂಗಳವಾರ ಸಂಜೆ 7-15ಕ್ಕೆ ಬೆಂಗಳೂರಿನ ಎನ್ಆರ್ ಕಾಲೋನಿಯಲ್ಲಿರುವ ಪ್ರಭಾತ್ ಕಲಾಪೂರ್ಣಿಮ ಸಭಾಂಗಣದಲ್ಲಿ “ಶಿವಾಯ ನಮಃ” ಎಂಬ ಶೀರ್ಷಿಕೆಯಲ್ಲಿ

ಗಿರಿಜಾ ಲೋಕೇಶ್

ನಾಡಿನ ಹೆಸರಾಂತ ನೃತ್ಯ ಕಲಾವಿದರಾದ ಪ್ರಶಾಂತ ಶಾಸ್ತ್ರಿ ಹಾಗೂ ನಾಟ್ಯ ಸುಕೃತ ಮತ್ತು ನಾಟ್ಯ ಕಲಾಕ್ಷೇತ್ರದ ನಿರ್ದೇಶಕರಾದ ಹೇಮಾ ಪ್ರಭಾತ್ ಅ ವರಿಂದ ವಿಶೇಷ ನೃತ್ಯ ಕಾರ್ಯಕ್ರಮ ಏರ್ಪಡಿಸಿದ್ದು, ಈ ವಿಶಿಷ್ಟ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಲನ ಚಿತ್ರ ಹಾಗೂ ರಂಗಭೂಮಿಯ ಹಿರಿಯ ಕಲಾವಿದರಾದ ಗಿರಿಜಾ ಲೋಕೇಶ್ ಅವರು ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles