ಏ.22ಕ್ಕೆ ಮಾರುತೇಶ್ವರ ಜಾತ್ರೆ


ಕುಷ್ಟಗಿ: ಸಮೀಪದ ಚಿಕ್ಕಮನ್ನಾಪೂರು ಗ್ರಾಮದ ಆರಾಧ್ಯದೈವ ಶ್ರೀ ಮಾರುತೇಶ್ವರ ಜಾತ್ರೆ ಏ.22ರಂದು ಬಸವ ಜಯಂತಿ ನಿಮಿತ್ತ ನಡೆಯಲಿದೆ.
ಬೆಳಗ್ಗೆ ಮಾರುತೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ, ನವಗ್ರಹ ಹೋಮ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ನಂತರ ನೂತನ ಮಹಾಗೋಪುರ ಅನಾವರಣ ಧ್ವಜ ಸ್ತಂಭ, ನವಗ್ರಹ ಮೂರ್ತಿ ಸ್ಥಾಪಿಸಲಾಗುವುದು. ಮಧ್ಯಾಹ್ನ 1ಗಂಟೆಗೆ ಮುಂಗೈ ಕುಸ್ತಿ ಜರುಗಲಿದೆ.
ಕಾರ್ಯಕ್ರಮದಲ್ಲಿ ಕುಷ್ಟಗಿಯ ಮದ್ದಾನೇಶ್ವರಮಠದ ಕರಿಬಸವ ಶಿವಾಚಾರ್ಯರು, ಗಂಗಾಧರಸ್ವಾಮಿ ಹಿರೇಮಠ ಸೇರಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ವ್ಯವಸ್ಥಾಪಕ ಸಂಗನಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles