ನೃತ್ಯ ಪ್ರದರ್ಶನ

ಬೆಂಗಳೂರು: ನಾಟ್ಯ ಭಾರತಿ ನೃತ್ಯ ಶಾಲೆಯ ವತಿಯಿಂದ ಜೂನ್ 26, ಬುಧವಾರ ಸಂಜೆ 6-00 ಗಂಟೆಗೆ ಮಲ್ಲೇಶ್ವರದ 14ನೇ ಅಡ್ಡರಸ್ತೆ (ಸಂಪಿಗೆ ರಸ್ತೆ)ಯಲ್ಲಿರುವ ಸೇವಾ ಸದನ ಸಭಾಂಗಣದಲ್ಲಿ ನೃತ್ಯ ಶಾಲೆಯ ಗುರುಗಳಾದ ವಿದ್ವಾನ್ ಶ್ರೀ ನಾಗೇಶ್ ಜಿ.ಎಸ್. ಮತ್ತು ಡಾ|| ಶ್ರೀಮತಿ ಶ್ರೀರಂಜಿತಾ ನಾಗೇಶ್ ರವರ ಸುಪುತ್ರಿಯೂ, ಶಿಷ್ಯರೂ ಆದ ಶ್ರೀಮತಿ ನೃತ್ಯಶ್ರೀ ಜಿ.ಎನ್. ಭಾವ ಪುಷ್ಯರಾಗ ಪಂಚಮಿ ವಿಷಯಾಧಾರಿತ ನೃತ್ಯ ಪ್ರದರ್ಶನ ನೀಡಲಿದ್ದಾರೆ.


ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಡಾ|| ಎಸ್. ಹೇಮಲತಾ (ನಿವೃತ್ತ ಪ್ರಾಧ್ಯಾಪಕರು, ಭೌತಶಾಸ್ತ್ರ), ಡಾ|| ಎಸ್.ಎನ್. ಸುಶೀಲ (ನಿವೃತ್ತ ಪ್ರಾಧ್ಯಾಪಕರು, ಪಫಾ೯ರ್ಮಿಂಗ್ ಆರ್ಟ್ಸ್ ವಿಭಾಗ, ಬೆಂಗಳೂರು ಯೂನಿವರ್ಸಿಟಿ), ವಿ|| ಶ್ರೀಮತಿ ಮಿನಲ್ ಪ್ರಭು (ನಿರ್ದೇಶಕರು, ಮುದ್ರಿಕ ಫೌಂಡೇಶನ್, ಬೆಂಗಳೂರು), ಡಾ|| ಕೃಪಾ ಫಡ್ಕೆ (ನೃತ್ಯಗಿರಿ, ಮೈಸೂರು) ಮತ್ತು ಡಾ|| ಆರ್.ವಿ. ರಾಘವೇಂದ್ರ, ಅನನ್ಯ, ಬೆಂಗಳೂರು) ಇವರುಗಳು ಆಗಮಿಸಲಿದ್ದಾರೆ.
ಹಿಮ್ಮೇಳ ಕಲಾವಿದರು : ನೃತ್ಯ ಸಂಯೋಜನೆ ಮತ್ತು ನಟ್ಟುವಾಂಗ : ವಿದ್ವಾನ್ ಶ್ರೀ ನಾಗೇಶ್ ಜಿ.ಎಸ್. ಮತ್ತು ಡಾ|| ಶ್ರೀಮತಿ ಶ್ರೀರಂಜಿತಾ ನಾಗೇಶ್, ಗಾಯನ : ‘ಗಾನಭಾರತಿ’ ಡಾ|| ಉಮಾ ಕುಮಾರ್, ಮೃದಂಗ : ವಿದ್ವಾನ್ ಶ್ರೀ ನಾಗರಾಜ್ ಜಿ. ಎನ್., ಕೊಳಲು : ವಿದ್ವಾನ್ ಶ್ರೀ ಮಹೇಶ್ ಸ್ವಾಮಿ, ಪಿಟೀಲು : ವಿದ್ವಾನ್ ಶ್ರೀ ಹೇಮಂತ್ ಕುಮಾರ್.
ಈ ವಿಶೇಷ ಕಾರ್ಯಕ್ರಮಕ್ಕೆ ನೃತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯುವ ಕಲಾವಿದೆಯನ್ನು ಪ್ರೋತ್ಸಾಹಿಸಬೇಕೆಂದು ಶ್ರೀಮತಿ ಮತ್ತು ಶ್ರೀ ನಾಗೇಶ್ ದಂಪತಿಗಳು ವಿನಂತಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles