‘ತಂಬಾಕು ಮುಕ್ತ ಸಮಾಜ’ ದ ಜಾಗೃತಿಗಾಗಿ ಮ್ಯಾರಥಾನ್‌


ಬೆಂಗಳೂರು: ಶ್ರೀ ಶ್ರೀ ರವಿಶಂಕರ್‌ ವಿದ್ಯಾಮಂದಿರ (ಬೆಂ.ಪೂರ್ವ)ಗುಂಜೂರು, ಮಾರತಹಳ್ಳಿ ಪೋಲಿಸ್‌ ಇಲಾಖೆ ಹಾಗೂ ಕ್ರೀಡಾಕ್ಷೇತ್ರ ಬೆಂಗಳೂರು ಇವರ ಸಹಯೋಗದಲ್ಲಿ‘ತಂಬಾಕು ಮುಕ್ತ ಸಮಾಜ’ ದ ಜಾಗೃತಿಗಾಗಿ ಮೇ 31ರಂದು ಬೆಳಗ್ಗೆ 8.45ಕ್ಕೆ ಶ್ರೀ ಶ್ರೀ ರವಿಶಂಕರ್‌ ವಿದ್ಯಾಮಂದಿರದಿಂದ 5ಕಿ.ಮೀ. ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿತ್ತು.


 ಮಾರತಹಳ್ಳಿ ಉಪ ವಿಭಾಗದ ಸಹಾಯಕ ಉಪ ಆಯುಕ್ತರಾದ ಡಾ. ಪ್ರಿಯದರ್ಶಿನಿ ಈಶ್ವರ್‌ ಸಾಣಿಕೊಪ್ಪ ಹಾಗೂ ಎಸ್‌ಎಸ್‌ಆರ್‌ವಿಎಂ ಪ್ರಾಂಶುಪಾಲರಾದ ಡಾ. ರೇಷ್ಮಾ ಗಣೇಶ್‌ ಅವರು ಶಾಲೆಯ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿವಿದ್ಯಾರ್ಥಿಗಳು, ಶಿಕ್ಷಕರು ತಂಬಾಕು ಮುಕ್ತ ಸಮಾಜಕ್ಕಾಗಿ ಪ್ರತಿಜ್ಞೆ ಸ್ವೀಕರಿಸಿದರು. ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
 ಕೆ.ಎಸ್‌.ಪಿ.ಎಸ್‌. ಯೋಗಾನಂದ ಸೋನಾರ್‌, ಕ್ರೀಡಾ ಕ್ಷೇತ್ರದ ಸಂಸ್ಥಾಪಕರಾದ ವೆಂಕಟೇಶ್‌ ಹಾಗೂ ಶ್ರೀಧರ್‌, ಡಾ. ಅಜರುದ್ದೀನ್‌, ಡಾ. ನವೀನ್‌, ಡಾ. ಶಿವಕುಮಾರ ಗುಣಾರೆ, ಡಾ. ಅಕ್ಷರಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles