ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಡಾ.ಕೋಳ್ಯೂರು ರಾಮಚಂದ್ರ ರಾಯರಿಗೆ ಸನ್ಮಾನ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ, ಯಕ್ಷಗಾನ ಕಲಾರಂಗ ರಿ. ಉಡುಪಿ ಇವರ ಆಯೋಜನೆಯಲ್ಲಿ, ಡಾ.ಕೋಳ್ಯೂರು ಶ್ರೀ ರಾಮಚಂದ್ರ ರಾಯರ 90ರ ಹುಟ್ಟುಹಬ್ಬದ ಗೌರವಾರ್ಥ ಕಲಾಭಿಯಾನ “ಕೋಳ್ಯೂರು ವೈಭವ” ಕಾರ್ಯಕ್ರಮದಲ್ಲಿ, ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಡಾ.ಕೋಳ್ಯೂರು ರಾಮಚಂದ್ರ ರಾಯರನ್ನು ಸನ್ಮಾನಿಸಿ, ಯಕ್ಷಗಾನದಲ್ಲಿ ಸ್ತ್ರೀಪಾತ್ರದಲ್ಲಿ 70 ವರ್ಷಗಳ ಸುಧೀರ್ಘ ಸಮಾಜಕ್ಕೆ ಉತ್ತಮ ಕೊಡುಗೆ, ಜತೆಗೆ ತಮ್ಮ ಮಕ್ಕಳೊಂದಿಗೆ 90 ರ ಸಂಭ್ರಮವನ್ನು ಸಂಭ್ರಮಿಸುತ್ತಿರುವ ರಾಮಚಂದ್ರರನ್ನು ಶ್ರೀಕೃಷ್ಣ ಮುಖ್ಯಪ್ರಾಣರು ಅನುಗ್ರಹಿಸಲಿ ಎಂದು ಆಶೀರ್ವಚನ ನೀಡಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles