ಹರಿನಾಮ ಸಂಕೀರ್ತನೆ ಜ. 31 ರಂದು

ಸಿಂಧನೂರು: ಹರಿಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟ ಶ್ರೀ ಪುರಂದರ ದಾಸರ ಹಾಗೂ ಸಾಧ್ವಿ ಶಿರೋಮಣಿ ತುರಡಗಿ ತಿಮ್ಮನವರ ಆರಾಧನಾ ನಿಮಿತ್ತ ಸರಣಿ ಹರಿನಾಮ ಸಂಕೀರ್ತನೆಯನ್ನು ಜನವರಿ 31 ರಂದು ಸಂಜೆ 6 ರಿಂದ ಏರ್ಪಡಿಸಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ವಿದುಷಿ ಕಮಲಾ ಪ್ರಾಣೇಶ ತಂಡ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ವಿಶಾಖ ರಾಮಕೃಷ್ಣ ಅವರಿಂದ ಶಾಸ್ತ್ರೀಯ ಸಂಗೀತ. ವಾದ್ಯ ಸಹಕಾರ ಸಿದ್ಧಾಂತ ಆನಂದ (ಮೃದಂಗ), ವೇದಜ್ಞ ನರಸಿಂಹ (ವಯೋಲಿನ್).

ವೇದಜ್ಞ ನರಸಿಂಹ


ನಂತರ ಶಾಂತಾ ರತ್ನಾಕರ ಕುಲಕರ್ಣಿ ಬಾಗಲಕೋಟ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ.
ಕಾರ್ಯಕ್ರಮವನ್ನು ಒಕ್ಕೂಟದ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles