ಮಂತ್ರಾಲಯ ಶ್ರೀಗಳವರಿಂದ ಸಂಸ್ಥಾನ ಪೂಜೆ

ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಪರಮ ಪೂಜ್ಯ108 ಶ್ರೀ ಸುಬುಧೇಂದ್ರ ತೀರ್ಥಶ್ರೀಪಾದರು ಶ್ರೀನರಸಿಂಹ ಜಯಂತಿಯ ಹಾಗೂ ದಿಗ್ವಿಜಯ ಸಂಚಾರ ನಿಮಿತ್ತ ನಗರದ ನಾನಾ ಕಾರ್ಯಕ್ರಮಕ್ಕಾಗಿ ಶ್ರೀಮಠಕ್ಕೆ ಆಗಮಿಸಿ ಶ್ರೀಮನ್ ಮೂಲ ರಾಮಚಂದ್ರ ದೇವರ ಸಂಸ್ಥಾನ ಪೂಜೆಯನ್ನು ದ್ವಾದಶಿ ಪ್ರಯುಕ್ತ ಪ್ರಾತಃ ಕಾಲದಲ್ಲಿ ನೆರವೇರಿಸಿ ಭಕ್ತರಿಗೆ ಅನುಗ್ರಹಿಸಿದರು.

ಇದೇ ಸಂದರ್ಭದಲ್ಲಿ “ವೈಶಾಖ ಮಾಸದ ವಸಂತ ಪೂಜೆ”ಯ ಅಂಗವಾಗಿ ಶ್ರೀಗಳ ಅಪ್ಪಣೆಯಂತೆ ಶ್ರೀ ಮಠದಲ್ಲಿ ಪಂಡಿತರಿಗೆ”ವಸಂತಪೂಜೆ” (ಫಲಾಹಾರದ ಪೂಜೆ) ಯನ್ನು ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ಏರ್ಪಡಿಸಿದ್ದರು ಈ ಶುಭ ಸಂದರ್ಭದಲ್ಲಿ ಪರಮಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ನಾನಾವಿಧ ಬಗೆಯ ಫಲಹಾರದ ತಿನಿಸು ಗಳನ್ನು ಮಾಡಿಸಿ ಪಂಡಿತರಿಗೆ ಉಣಬಡಿಸಿ ಪಂಡಿತರ ಮನಸ್ಸನ್ನು ಸಂತೋಷ ಪಡಿಸಿದರು ನಂತರ ಎಲ್ಲಾ ಪಂಡಿತರಿಗೂ ಪರಮ ಪೂಜ್ಯ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಫಲಮಂತ್ರಾಕ್ಷತೆ ಹಾಗೂ ಸಂಭಾವನೆ ಕೊಟ್ಟು ಆಶೀರ್ವದಿ ಸಿದರು ಇದೇ ಸಂದರ್ಭದಲ್ಲಿ ಭಕ್ತಾದಿಗಳಿಗೂ ಫಲಹಾರದ ವ್ಯವಸ್ಥೆಯನ್ನುಮಾಡಿಸಿ ಭಕ್ತರಿಗೂ ಫಲ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು

Related Articles

ಪ್ರತಿಕ್ರಿಯೆ ನೀಡಿ

Latest Articles