ಪುತ್ತೂರು: ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳ ಇವರಿಂದ ಪುತ್ತೂರು ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದವರ ಸಹಯೋಗದೊಂದಿಗೆ ಜ.1 ರಿಂದ 4 ರವರೆಗೆ ಸಂಜೆ 6 ಗಂಟೆಯಿಂದ ಯಕ್ಷಗಾನ ನಡೆಯಲಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಯಕ್ಷೋತ್ಸವ ನಡೆಯಲಿದೆ.
ಜ.1ರಂದು ಇಂದ್ರಕೀಲಕ – ಊರ್ವಶಿ ಶಾಪ ಮಕರಾಕ್ಷ ಕಾಳಗ ಕಥಾಪ್ರಸಂಗ.
ಜ.2: ಹಿರಣ್ಯಾಕ್ಷ- ಹಿರಣ್ಯಕಶಿಪು- ಸ್ವಯಂ ಪ್ರಭೆ
ಜ.3: ದಮಯಂತಿ ಪುನಃ ಸ್ವರ್ಯವರ-ಗದಾಯುದ್ಧ -ರಕ್ತರಾತ್ರಿ
ಜ.4 : ಶುಕ್ರನಂದನೆ
ಕಥಾ ಪ್ರಸಂಗ ನಡೆಯಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
























