ಸದ್ಗುರು ಜಗ್ಗಿ ವಾಸುದೇವ್ ಅವರು ರಚಿಸಿದ ವರ್ಣಚಿತ್ರ ರೂ. 2.3 ಕೋಟಿಗೆ ಹರಾಜು

ಬೆಂಗಳೂರು: ಈಶ ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ರಚಿಸಿದ ‘ಸಿರ್ಕಾ 2020’ ವರ್ಣಚಿತ್ರವು ರೂಪಾಯಿ 2 ಕೋಟಿ 30ಲಕ್ಷಕ್ಕೆ ಹರಾಜಾಗಿದೆ.

ಸದ್ಗುರು ಅವರ ಮೂರನೇ ವರ್ಣ ಚಿತ್ರ ಇದಾಗಿದ್ದು, ಇದನ್ನು ಆನ್‌ಲೈನ್‌ ವೇದಿಕೆಯಲ್ಲಿ ಹರಾಜು ಕರೆಯಲಾಗಿತ್ತು. ಅವರ ಮೊದಲ ಕಲಾಕೃತಿ ‘ಟು ಲಿವ್ ಟೋಟಲಿ’ ಅಮೂರ್ತ ತೈಲ ವರ್ಣ ಚಿತ್ರವು ರೂಪಾಯಿ 4.14 ಕೋಟಿಗೆ ಹರಾಜಾಗಿತ್ತು. ಎರಡನೇ ಕಲಾಕೃತಿ ‘ಭೈರವ’ ರೂಪಾಯಿ 5.1 ಕೋಟಿಗೆ ಹರಾಜಿನಲ್ಲಿ ಮಾರಾಟವಾಗಿತ್ತು.

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ನಿಂತಿರುವ ಈಶ ಫೌಂಡೇಷನ್, ‘ವೈರಾಣುವನ್ನು ಹೊಡೆದೋಡಿಸಿ’ ಎಂಬ ಅಭಿಯಾನ ನಡೆಸುತ್ತಿದೆ. ಚಿತ್ರದ ಮಾರಾಟದಿಂದ ಬಂದ ಹಣವನ್ನು ಸಂಪೂರ್ಣವಾಗಿ ಕೋವಿಡ್ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಸದ್ಗುರು ಹೇಳಿಕೊಂಡಿದ್ದಾರೆ.

ಚಿತ್ರ: https://www.ishaoutreach.org/en/action-rural-rejuvenation/sadhguru-painting

Related Articles

ಪ್ರತಿಕ್ರಿಯೆ ನೀಡಿ

Latest Articles