ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದವರಿಂದ ಕಾರ್ಯಕ್ರಮ ಆಯೋಜನೆ

ಇಂದು ಸಂಜೆ ಸ್ವಾಮಿ ಹರ್ಷಾನಂದ ಮಹಾರಾಜ್ ಅವರ ಪುಣ್ಯಸ್ಮರಣೆ

ಬೆಂಗಳೂರು: ಶ್ರೀ ರಾಮಕೃಷ್ಣ ಮಠದ ಹಿರಿಯ ಸಾಧುಗಳಾಗಿದ್ದ ಸ್ವಾಮಿ ಹರ್ಷಾನಂದ ಮಹಾರಾಜ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮ ಹಮ್ಮಿಕೊಂಡಿದ್ದು ಜ.31ರಂದು ಸಂಜೆ 5 ರಿಂದ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 5 ರಿಂದ ವಿವೇಕ ಹಂಸ ಬಳಗದವರಿಂದ, ಶ್ರೀಮುರಳಿ ರಾಯಸಂ ಅವರಿಂದ ಸಂಕೀರ್ತನೆ. ನಂತರ 5.30 ರಿಂದ ಶಿಕ್ಷಣ ತಜ್ಞರು ಹಾಗೂ ಉಪನ್ಯಾಸಕಿ ಪದ್ಮಿನಿ ಮುರಳಿ ಅವರಿಂದ ಸ್ವಾಮಿ ಹರ್ಷಾನಂದ ಮಹಾರಾಜ್ ಅವರ ಅದ್ಭುತ ಜೀವನ ಪರಿಚಯ ಕುರಿತು ಉಪನ್ಯಾಸ.
5.50 ರಿಂದ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಮಹಾರಾಜ್ ಅವರಿಂದ ಸ್ವಾಮಿ ಹರ್ಷಾನಂದ ಮಹಾರಾಜ್ ಅವರ ಸಾನ್ನಿಧ್ಯದಲ್ಲಿ ಸಾಧನಾ ಜೀವನವನ್ನು ಆರಂಭಿಸಿದ ದಿನಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮ ಫೇಸ್‌ಬುಕ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.
ಲಿಂಕ್:https:facebook.com/sriramakrishnasevashramapavagada

Related Articles

ಪ್ರತಿಕ್ರಿಯೆ ನೀಡಿ

Latest Articles