ಪ್ರಜಾರಾಜ್ಯ

*ಎಸ್.ವ್ಹಿ.ಚವಡಾಪೂರ

ಅಣಕ ಮಾಡದಿರಿ ಪ್ರಜಾಸತ್ತೆಯನ್ನು
ಸೋರುತಿದೆ ಮನೆಯಂದು
ಕೆಡವಬಹುದೆ ಮನೆಯನ್ನ

ಕಲ್ಯಾಣ ರಾಜ್ಯವಾಗಲಿಲ್ಲವೆಂದು
ಬರಮಾಡಿಕೊಳ್ಳಬಹುದೇ
ಪೋಲಿಸ ರಾಜ್ಯವನ್ನ
ನೆನೆಸಬಹುದೇ ಹಿಟ್ಲರನನ್ನ

ಬೃಹತ್ ಯಂತ್ರವಿದು ಡೆಮಾಕ್ರಸಿ
ಸಡಿಲವಾಗಿರಬಹುದು
ಅಲ್ಲೊಂದು ಇಲ್ಲೊಂದು ನಟ್,ಸ್ಕೂçಗಳು
ಇಲ್ಲದಿರಬಹುದು ಮತ್ತೊಂದೆಡ ಗ್ರೀಸ್
ಕಸ ತುಂಬಿರಬಹುದು
ಏನು ಮಾಡುವುದು ಈ ದಿನ.?

ಬೇಡ ಪ್ರಜಾ ಸಂಸ್ಕೃತಿಯ ವಿಕೃತಿ
ಬೇಡವೇ ಬೇಡ
ಮನೆ ಕೆಡುವುದು
ಬದುಕಿದ್ದಾನೆ ಎಲ್ಲಾ ಕಡೆ
ಜನ ಸಾಮಾನ್ಯ ನಾಯಕ
ಅವನಿಗಿದೆ ನವೀಕರಣ ಶಕ್ತಿ.

ಎಸ್.ವ್ಹಿ.ಚವಡಾಪೂರ
ವಿಶ್ರಾಂತ ಉಪನ್ಯಾಸಕರು
“ದಾನಮ್ಮ ನಿಲಯ” , ನಂ 10/3.4
22 ನೇ ಕ್ರಾಸ್.ವಿಜಯನಗರ ಲೇಔಟ್
ಶಿವಾಲಯ ದೇವಸ್ಥಾನದ ಹತ್ತಿರ
ವಿದ್ಯಾಗಿರಿ ಬಾಗಲಕೋಟೆ ೫೮೭೧೦೨

Related Articles

ಪ್ರತಿಕ್ರಿಯೆ ನೀಡಿ

Latest Articles