ಶ್ರೀ ಗೋಪಾಲದಾಸರ ಆರಾಧನೆಯ ಪ್ರಯುಕ್ತ ಮತ್ತೀಕೆರೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗಾಯನ ಸ್ಪರ್ಧೆ

ಬೆಂಗಳೂರು: ‘ಕರ್ನಾಟಕ ಸಂಗೀತ ಪಿತಾಮಹ’ ಶ್ರೀ ಪುರಂದರದಾಸರ ಹಾಗೂ ‘ಉತ್ತನೂರಿನ ಋಷಿಕುಲೋತ್ತಮ’ ಶ್ರೀ ಗೋಪಾಲದಾಸರ ಆರಾಧನೆಯ ಪ್ರಯುಕ್ತ ಮತ್ತೀಕೆರೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆ.6 ರಂದು ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ 5 ವರ್ಷದಿಂದ 50 ವರ್ಷ ವಯಸ್ಸಿನವರು ಭಾಗವಹಿಸಿದ್ದರು. ಶ್ರೀಮತಿ ಮಾನಸಾ ಜಯರಾಜ್ ಕುಲಕರ್ಣಿ ಮತ್ತು ಶ್ರೀ ಪ್ರಹ್ಲಾದಾಚಾರ್ ಅವರುಗಳು ತೀರ್ಪುಗಾರರು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು. ಡಾ. ಎನ್. ಜಿ. ವಿಜಯಲಕ್ಷ್ಮಿ ಅವರು  ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಟ್ಟರು.

Related Articles

ಪ್ರತಿಕ್ರಿಯೆ ನೀಡಿ

Latest Articles