ಡಾ. ಚತುರ್ವೇದಿ ವೇದವ್ಯಾಸಾಚಾರ್ ಅವರಿಂದ ಸುಮಧ್ವ ವಿಜಯ ಪ್ರವಚನ

ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಜಯನಗರ 4ನೇ ‘ಟಿ’ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 21 ರಂದು ಮಧ್ವ ನವಮಿ ಕಾರ್ಯಕ್ರಮ ಜರುಗಿಸಲಿದ್ದು, ಅಂದು ಬೆಳಗ್ಗೆ 7 ಗಂಟೆಗೆ ಮಧು ಅಭಿಷೇಕ, 8 ಗಂಟೆಗೆ ಫಲ ಪಂಚಾಮೃತ, 9-30ಕ್ಕೆ ರಾಜಬೀದಿಯಲ್ಲಿ ರಥೋತ್ಸವ, 10-30ಕ್ಕೆ ಡಾ. ಚತುರ್ವೇದಿ ವೇದವ್ಯಾಸಾಚಾರ್ ಅವರಿಂದ “ಸುಮಧ್ವ ವಿಜಯ” ಪ್ರವಚನದ ಮಂಗಳ. ನಂತರ ಸ್ವಸ್ತಿ ವಾಚನ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ರಘು ಅವರು ತಿಳಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles