ಸುಜ್ಞಾನ ಪ್ರಭು ಮಹಾಸ್ವಾಮಿ ಭಗವತ್ಪಾದರ ಜಯಂತ್ಯೋತ್ಸವ

ಹಾಸನ: ಅರಕಲಗೋಡು ತಾಲ್ಲೂಕು ಅರೆಮಾದನಹಳ್ಳಿ ವಿಶ್ವಕರ್ಮ ಪೀಠದ ಪರಮ ಪೂಜ್ಯ ಅನಂತ ವಿಭೂಷಿತ ಶ್ರೀ ಮದಾದಿ ಜಗದ್ಗುರು ಸುಜ್ಞಾನ ಪ್ರಭು ಮಹಾಸ್ವಾಮಿ ಭಗವತ್ಪಾದರ 994ನೇ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಉಪನಯನ ಕಾರ್ಯಕ್ರಮ ಶ್ರೀಮಠದಲ್ಲಿ ಫೆ.22 ರಂದು ನಡೆಯಲಿದೆ.
ಅಂದು ಬೆಳಗ್ಗೆ ಶ್ರೀ ವಿಶ್ವಕರ್ಮ ಧ್ವಜಾರೋಹಣ. ಆಗ್ರೋದಕ ತರುವುದು, ಗಣಪತಿ ಪೂಜೆ, ವಿಶ್ವಬ್ರಹ್ಮ ಪೂಜೆ ಮತ್ತು ಪುಣ್ಯಾಹದೊಂದಿಗೆ ಉಪನಯನ ಪ್ರಕ್ರಿಯೆ ನಡೆಯಲಿವೆ.


ನಂತರ ಶ್ರೀ ಸುಜ್ಞಾನ ಪ್ರಭು ಮಹಾಸ್ವಾಮಿ ಭಗವತ್ಪಾದಂಗಳವರ ಸಮಾಧಿಸ್ಥ ಅಧಿಷ್ಠಾನದ ಮಹಾ ಸನ್ನಿಧಿಯಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ ನಂತರ ಉತ್ಸವ ನೆರವೇರಲಿದೆ. ಶ್ರೀಮಠದ ಯತಿಶ್ರೇಷ್ಠರಾದ ಪರಮಪೂಜ್ಯ ಅನಂತ ವಿಭೂಷಿತ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸುವರು. ಚಿಕ್ಕಬಳ್ಳಾಪುರದ ನಂದಿಯ ಜ್ಞಾನನಂದ ಆಶ್ರಮದ ಸ್ವಾಮಿ ಶೀವಾತ್ಮಾನಂದ ಸರಸ್ವತಿ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles