ತೊಟ್ಟಿಲುಪೂಜಾ ದಾಸವಾಣಿ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ, ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಆಚಾರ್ಯರ ನೇತೃತ್ವದಲ್ಲಿ ಪ್ರತಿ ಗುರುವಾರದಂತೆ ಶ್ರೀ ಗುರುರಾಯರ ಬೃಂದಾವನಕ್ಕೆ ಅಭಿಷೇಕ, ಉತ್ಸವ, ತೊಟ್ಟಿಲು ಪೂಜಾ “ದಾಸವಾಣಿ” ಕಾರ್ಯಕ್ರಮ ದೇಸಾಯಿ ಸುಧೀಂದ್ರರವರ ಸಹಕಾರದೊಂದಿಗೆ ನೆರವೇರಿತು.

ಶ್ರೀಹರಿ, ಬಿ. ವಿ. ಮೈಸೂರು ಇವರಿಂದ ದಾಸವಾಣಿ ಕಾರ್ಯಕ್ರಮವು ನೆರವೇರಿತು, ಮೃದಂಗ – ರವಿಕುಮಾರ್, ಪಿಟೀಲು- ಅರ್ಜುನ್ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀರಾಘವೇಂದ್ರಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾದರು ಎಂದು ಕಿಶೋರ್ ಆಚಾರ್ಯರು ತಿಳಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles