ಗಣಹೋಮ ಮತ್ತು ನರಸಿಂಹ ಹೋಮ ಸಂಪನ್ನ

ಸಾಲಿಗ್ರಾಮ: ಶ್ರೀಗುರುನರಸಿಂಹ ದೇವಳದಲ್ಲಿ ಲೋಕಕಲ್ಯಾಣಾರ್ಥ ಸಂಕಲ್ಪದಲ್ಲಿ ದ್ವಾದಶ ನಾಳಿಕೇರ ಗಣಯಾಗ, ಸಹಸ್ರ ಸಂಖ್ಯೆಯಲ್ಲಿ ನರಸಿಂಹ ಹೋಮ ಮತ್ತು ಮೂಡುಗಣಪತಿ ಸೇವೆಯು ಇಂದು ಸಂಪನ್ನಗೊಂಡಿತು ಶ್ರೀದೇವಳದ ತಂತ್ರಿಗಳಾದ ವೇ.ಮೂ.ಕೃಷ್ಣ ಸೋಮಯಾಜಿ ಜೋಯಿಸರಾದ ವೇ.ಮೂ. ರತ್ನಾಕರ ಸೊಮಯಾಜಿ ಅರ್ಚಕರಾದ ವೇ,ಮೂ.ಜನಾರ್ದನ ಅಡಿಗ ಮತ್ತು ಸಹಪುರೋಹಿತರ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿದವು.

ಹೋಮದ ಧಾರ್ಮಿಕ ಕಾರ್ಯಕ್ರಮಗಳ ಕರ್ತ್ರರಾಗಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ ಕೆ.ಎಸ್, ಕಾರಂತ ದಂಪತಿಗಳು ಮತ್ತು ಉಪಾಧ್ಯಕ್ಷರಾದ ವೇ.ಮೂ.ಗಣೇಶಮೂರ್ತಿ ನಾವಡ ದಂಪತಿಗಳು ನಿರ್ವಹಿಸಿದರು ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಪಿ. ಲಕ್ಷ್ಮಿನಾರಾಯಣ ತುಂಗ, ಕೊಶಾಧಿಕಾರಿ ವೇ.ಮೂ. ಪರಶುರಾಮ ಭಟ್, ಸದಸ್ಯರುಗಳಾದ ಶ್ರೀ ಎ.ವಿ. ಶ್ರೀಧರ ಕಾರಂತ, ಶ್ರೀ ಕೆ.ಅನಂತಪದ್ಮನಾಭ ಐತಾಳ, ಶ್ರೀ ಪಿ.ಸದಾಶಿವ ಐತಾಳ, ಶ್ರೀ ಆರ್.ಎಂ. ಶ್ರೀಧರ ರಾವ್ ಹೋಮದ ಯಶಸ್ವಿಗಾಗಿ ಉಪಸ್ಥಿತರಿದ್ದು ಸಹಕರಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles