ಶ್ರೀ ವಾದಿರಾಜರ ಆರಾಧನೆ, ಮತ್ತಿಕೆರೆ ರಾಘವೇಂದ್ರಸ್ವಾಮಿ ಮಠದಲ್ಲಿ ಭಜನೆ, ಗೋಷ್ಠಿ

ಶ್ರೀ ವಾದಿರಾಜರು ಜನಿಸಿದ ಸಂವತ್ಸರ ಶ್ರೀ ಶಾರ್ವರಿ ಮಾಘ ಶುದ್ಧ ದ್ವಾದಶಿ, ಶ್ರೀ ವಾದಿರಾಜರು ಸಜೀವ ಬೃಂದಾವನಸ್ಥರಾಗಿದ್ದು ಶ್ರೀ ಶಾರ್ವರಿ ನಾಮ ಸಂವತ್ಸರ ಫಾಲ್ಗುಣ ಬಹುಳ ತೃತೀಯ. ಅವರ ಜೀವಮಾನ 120 ವರ್ಷದ ಇದು ಶಾರ್ವರಿ ಸಂವತ್ಸರ ಮತ್ತು 421ನೇ ವರ್ಷದ ಆರಾಧನೆ ಪ್ರಯುಕ್ತ ಮತ್ತಿಕೆರೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಜನೆ, ಗೋಷ್ಠಿ ಹಾಗು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಡಾ. ಎನ್ಜಿ ವಿಜಯಲಕ್ಷ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ದಾಸವಾಣಿ ಫೇಸ್ಬುಕ್ ಸಂಸ್ಥಾಪಕರಾದ ಜಯರಾಜ್ ಕುಲ್ಕರ್ಣಿ ಮತ್ತು ಮಠದ ಸಮಸ್ತ ಕಾರ್ಯಕಾರಿ ಸಮಿತಿ ಮತ್ತು ವ್ಯಸ್ಥಾಪಕರು ಉಪಸ್ಥಿತರಿದ್ದರು. ದೀಪ ಬೆಳಗುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಮತ್ತಿಕೆರೆ ಮಧ್ವ ಮಹಿಳಾ ಮಂಡಳಿ ಮತ್ತು ಅಮರಜ್ಯೋತಿ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಿತು.

ಅನಘ ಕೌಶಿಕ್, ರಕ್ಷಿತಾ , ದೀಪ್ತಿ ಯಶಸ್ ಮತ್ತು ನಾಗಸುಮನಾ ಹರಿಪ್ರಸಾದ್ ಅವರಿಂದ ವಾದಿರಾಜರ ಕುರಿತು ಗೋಷ್ಠಿ ನಡೆಯಿತು. ರಸಪ್ರಶ್ನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೆ ಸಂದರ್ಭದಲ್ಲಿ ದಾಸವಾಣಿ ಸಂಸ್ಥಾಪಕರಾದ ಜಯರಾಜ್ ಕುಲ್ಕರ್ಣಿ ಅವರಿಗೆ ಮಠದ ವತಿಯಿಂದ ಸನ್ಮಾನಿಸಲಾಯಿತು.

Related Articles

ಪ್ರತಿಕ್ರಿಯೆ ನೀಡಿ

Latest Articles