ಪೇಜಾವರ ಶ್ರೀ ವಿಶ್ವೇಶ ತೀರ್ಥರ ಪ್ರವಚನಗಳಿಂದ ಆಯ್ದ ಕಥೆಗಳ ಸಂಗ್ರಹ ಕೃತಿ, ಈಗ ಮಾರುಕಟ್ಟೆಯಲ್ಲಿ

ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ! ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದೂ ಖುಷಿಕೊಡುವ ಸಂಗತಿ.

ಎಂಟುದಶಕಗಳ ಸನ್ಯಾಸ ಜೀವನ ನಡೆಸಿದ್ದ ಪೇಜಾವರ ಮಠದ ಪೂಜ್ಯ ವಿಶ್ವೇಶ ತೀರ್ಥ ಸ್ವಾಮೀಜಿ, ತಮ್ಮ ಸಾವಿರಾರು ಆಶೀರ್ವಚನ – ಪ್ರವಚನಗಳಲ್ಲಿ ಹೇಳಿದ ಕಥೆಗಳು ಸಾವಿರಾರು. ಅವೆಲ್ಲವೂ ಕೂಡ ಭಾರತೀಯ ಸಂಸ್ಕೃತಿ, ಪರಂಪರೆ, ಜನಜೀವನ, ಜೀವನಮೌಲ್ಯಗಳು, ಸದಾಚಾರಗಳನ್ನು ಸುಲಭವಾಗಿ ಸರಳವಾಗಿ ಪರಿಚಯಿಸುವ ಕಥೆಗಳು, ದೃಷ್ಟಾಂತ ಕಥೆಗಳು.

ಪೂಜ್ಯರು ಹೇಳಿದ ಕಥೆಗಳಲ್ಲೇ ತಮಗೆ ದೊರೆತಷ್ಟನ್ನು ಸಂಪಾದಿಸಿ, ಪುಸ್ತಕರೂಪದಲ್ಲಿ ತಂದಿದ್ದಾರೆ, ರಾಮಕುಂಜದ ಟಿ. ನಾರಾಯಣಭಟ್ಟರು.

‘ವಿಶ್ವಸಂದೇಶ: ಪೂರ್ವಾರ್ಧ, ಉತ್ತರಾರ್ಧ’, ವಿಶ್ವಕಥಾಕುಂಜ’ ಹೆಸರಿನ ಈ ಮೂರು ಪುಸ್ತಕಗಳಲ್ಲಿ 600 ಕ್ಕೂ ಹೆಚ್ಚಿನ ಕಥೆಗಳಿವೆ. ಪುಟ, ಅರ್ಧಪುಟದಷ್ಟಿರುವ ಒಂದೊಂದು ಕಥೆಯೂ ಗಾತ್ರದಲ್ಲಿ ಚಿಕ್ಕದು; ಅದು ನಿರ್ವಹಿಸುವ ಪಾತ್ರದಲ್ಲಿ ಬಹಳ ದೊಡ್ಡದು.

ಅಜ್ಜ-ಅಜ್ಜಿಯರಿಗೆ, ತಾಯಿ-ತಂದೆಯರಿಗೆ, ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರಿಗೆ, ವ್ಯಕ್ತಿತ್ವವಿಕಸನ ತರಬೇತುದಾರರಿಗೆ, ಭಾಷಣಕಾರರಿಗೆ ಮಾಹಿತಿಕಣಜವಾಗಿ ಕಥಾಕಣಜವಾಗಿ ಒದಗಿಬರುವ ಈ ಕೃತಿಗಳು ಸಾಮಾನ್ಯ ಓದಿಗೂ ಹೇಳಿ ಮಾಡಿಸಿದಂತಿವೆ! ಪುಟ್ಟಮಕ್ಕಳೂ ಕುತೂಹಲದಿಂದ ಓದುವಂತಿವೆ. ಮೂರನ್ನೂ ಓದಿ ಮುಗಿಸುವಾಗ ಪೂಜ್ಯ ಸ್ವಾಮಿಜೀಯವರ ಕಥಾಸಂಗ್ರಹವನ್ನು ಕುರಿತು ಬೆರಗು, ಅಚ್ಚರಿ ಉಂಟಾಗುವುದರಲ್ಲಿ ಆಶ್ಚರ್ಯವಿಲ್ಲ.

ಆಸಕ್ತರು ಈ ಮೂರೂ ಪುಸ್ತಕಗಳನ್ನು ಖರೀದಿಸಲು WhatsApp ಮಾಡಿ : 7483681708

Related Articles

ಪ್ರತಿಕ್ರಿಯೆ ನೀಡಿ

Latest Articles