ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ, ಶ್ರೀ ವಿದ್ಯಾಪ್ರಸನ್ನ ತೀರ್ಥರಿಂದ ವಿಶೇಷ ಪೂಜೆ

ವೈಶಾಖ ಮಾಸ ಶುಕ್ಲ ಪಕ್ಷದ ಪೌರ್ಣಮಿಯಂದು ಶ್ರೀ ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ದಶಾವತಾರಗಳಲ್ಲಿ ನಾಲ್ಕನೇ ಅವತಾರವೇ ನರಸಿಂಹಾವತಾರ. ಈ ದಿನ ವಿಷ್ಣುದೇವನು ನರಸಿಂಹ ದೇವರ ಅವತಾರದಲ್ಲಿ ದುರಿತಗಳನ್ನು ದೂರ ಮಾಡಿ ಅಭಯವನ್ನು ನೀಡುತ್ತಾನೆ ಎಂಬುದು ಭಕ್ತಬಾಂಧವರ ನಂಬಿಕೆ.
ಇ0ದು ಎಲ್ಲೆಡೆ ಶ್ರೀ ನರಸಿಂಹ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಅಂತೆಯೇ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥರಿಂದ ನರಸಿಂಹ ದೇವರಿಗೆ ವಿಶೇಷ ಪೂಜೆ, ಅಭಿಷೇಕಗಳು ನಡೆದವು.

Related Articles

ಪ್ರತಿಕ್ರಿಯೆ ನೀಡಿ

Latest Articles