ವರವ ಕೊಡು ಮಹಾಲಕ್ಷ್ಮೀ

ಹೆಸರೇ ಸೂಚಿಸುವಂತೆ ವರಗಳನ್ನು ಬೇಡುವ ಸಲುವಾಗಿ ಮಾಡುವ ಲಕ್ಷ್ಮೀ ದೇವಿಯ ವ್ರತ. ಈ ವ್ರತವನ್ನು ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಮಾಡುತ್ತಾರೆ. ಕೆಲವರ ಮನೆಯಲ್ಲಿ ವ್ರತ ಮಾಡುವ ಪದ್ಧತಿ ಇರುತ್ತದೆ. ಇನ್ನು ಕೆಲವರು ತಮ್ಮ ಮನೆಗಳಲ್ಲಿ ಲಕ್ಷ್ಮೀ ಪೂಜೆ ಮಾಡುತ್ತಾರೆ. ಹಾಗೆಯೇ ಇನ್ನು ಕೆಲವು ಕಡೆ ದೇವಸ್ಥಾನಗಳಲ್ಲಿ ಸಾರ್ವತ್ರಿಕವಾಗಿ ವರಮಹಾಲಕ್ಷ್ಮೀ ಪೂಜೆ ಕೈಗೊಳ್ಳುತ್ತಾರೆ.

ಭಾರತದಲ್ಲಿ ಆಚರಿಸುವ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ವ್ರತವು ಒಂದು. ಅದರಲ್ಲೂ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ವಿಷ್ಣುವಿನ ಪತ್ನಿ ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿ ಹಣ, ಆಹಾರ, ಆರೋಗ್ಯ, ಸಂಪತ್ತು, ಸಂತಾನ, ದೀರ್ಘ ಸುಮಂಗಲಿಯಾಗಿ ಬಾಳುವಂತೆ ಹರಸು ಎಂದು ಲಕ್ಷ್ಮೀಯಲ್ಲಿ ಬೇಡುತ್ತಾರೆ. ವಿಶೇಷವಾಗಿ ಮದುವೆಯಾದ ಹೆಣ್ಣುಮಕ್ಕಳು ಈ ಪೂಜೆಯನ್ನು ಕೈಗೊಳ್ಳುತ್ತಾರೆ.
 ಶ್ರಾವಣದ ಎರಡನೇ ಶುಕ್ರವಾರದಂದು ಆಚರಿಸುವ ವರಮಹಾಲಕ್ಷ್ಮೀ ಹಬ್ಬದಂದು ಭಾಗ್ಯಲಕ್ಷ್ಮೀಯನ್ನು ಮನೆಗೆ ತುಂಬಿಸಿಕೊಳ್ಳುವ ಸಡಗರದ ಜತೆಗೆ ಹಬ್ಬದ ಸಂಭ್ರಮವಿರುತ್ತದೆ.
ವ್ರತ ಮಾಡುವವರು ವರಮಹಾಲಕ್ಷ್ಮೀ ಹಬ್ಬದ ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ನಂತರ ಪೂಜಾ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸುತ್ತಾರೆ. ಅಷ್ಟದಳ ಪದ್ಮದ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು, ಅಕ್ಕಿ ಹಾಕಿ, ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ ಇಟ್ಟು ಅದರ ಮೇಲೆ ಅರಿಶಿಣ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು ಲಕ್ಷ್ಮೀದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಬೇಕು.
ವೀಳ್ಯದ ಎಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲಿಡಬೇಕು. ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತಾರೆ. ದೇವಿಗೆ ಪೆÇಂಗಲ್ ನೈವೇದ್ಯ ಮಾಡಿ ಅರ್ಪಿಸುತ್ತಾರೆ. ಮುತ್ತೈದೆಯರನ್ನು ಪೂಜೆಗೆ ಆಮಂತ್ರಿಸಿ, ಪೂಜೆಯ ನಂತರ ಅವರಿಗೆ ತಾಂಬೂಲ ನೀಡುವ ಪದ್ಧತಿ ಇದೆ. ವ್ರತ ಮಾಡುವವರು ಪೂಜೆ ಮುಗಿದ ನಂತರ ಆಹಾರ ಸೇವಿಸುತ್ತಾರೆ.
ಹಾಗೆಯೇ ಮದುವೆಯಾದ ಹೆಣ್ಣು ಮಗಳು ಆಷಾಢದಲ್ಲಿ ತವರಿಗೆ ಬಂದಿರುತ್ತಾಳೆ. ಶ್ರಾವಣದಲ್ಲಿ ಗಂಡನ ಮನೆಗೆ ಹೋದ ಆಕೆ  ಮತ್ತೆ ವರಮಹಾಲಕ್ಷ್ಮೀ ಪೂಜೆಗೆಂದು ತವರಿಗೆ ಬಂದಿರುತ್ತಾಳೆ. ತಾಯಿ ಆಕೆಗೆ ಬಾಗಿನ ಕೊಟ್ಟು ಅವಳನ್ನು ಹರಿಸುತ್ತಾಳೆ. ಈ ವ್ರತದಲ್ಲಿ ಹಬ್ಬದ ಅಡುಗೆಯ ಸಂಭ್ರಮವಿರುತ್ತದೆ. ಒಂದು ರೀತಿಯಲ್ಲಿ ಈ ಹಬ್ಬ ಕೌಟುಂಬಿಕ ಬಾಂಧವ್ಯವನ್ನು ಬೆಸೆಯುತ್ತದೆ. ಹಬ್ಬದಡುಗೆಯಲ್ಲಿ ಹೋಳಿಗೆ, ಕಡುಬು, ಕೋಸಂಬರಿ, ವಡೆ, ಪೆÇಂಗಲ್, ಚಕ್ಕುಲಿ, ಬಜ್ಜಿ, ಶಂಕರಪೆÇೀಳೆ ಇವೇ ಮೊದಲಾದ ತಿನಿಸುಗಳನ್ನು ಮಾಡುತ್ತಾರೆ.

ವ್ರತದ ಹಿನ್ನೆಲೆ:
ಈ ಆಚರಣೆಯ ಹಿಂದೆ ಹಲವು ಕಥೆಗಳಿವೆ. ಸ್ಕಂದ ಪುರಾಣದಲ್ಲಿ ಉಲ್ಲೇಖವಾದಂತೆ ಮಹಿಳೆಯರಿಗೆ ಉಪೆÇೀಗವಾಗುವಂತಹ ವ್ರತವನ್ನು ಸೂಚಿಸುವಂತೆ ಪಾರ್ವತಿ ಶಿವನಲ್ಲಿ ಬೇಡಿಕೊಳ್ಳುತ್ತಾಳೆ. ವರಮಹಾಲಕ್ಷ್ಮೀ ವ್ರತದ ಮಹತ್ವದ ಬಗ್ಗೆ ಶಿವ ಪಾರ್ವತಿಗೆ ಚಾರುಮತಿಯ ಕಥೆಯ ಮೂಲಕ ವಿವರಿಸುತ್ತಾಳೆ. ಚಾರುಮತಿಯ ಭಕ್ತಿಯನ್ನು ಮೆಚ್ಚಿದ ಪಾರ್ವತಿ ಒಂದು ದಿನ ಚಾರುಮತಿಯ ಕನಸಿನಲ್ಲಿ ಬಂದು ವರಮಹಾಲಕ್ಷ್ಮೀ ವ್ರತ ಮಾಡುವಂತೆ ಸೂಚಿಸುತ್ತಾಳೆ. ವ್ರತದ ಪೂಜಾ ವಿಧಾನವನ್ನು ತಿಳಿಸಿಕೊಡುತ್ತಾಳೆ. ಚಾರುಮತಿ ನೆರೆಹೊರೆಯವರನ್ನೆಲ್ಲಾ ಕರೆದು ವರಮಹಾಲಕ್ಮ್ಷೀ ಪೂಜೆ ಕೈಗೊಳ್ಳುತ್ತಾಳೆ. ಎಲ್ಲರೂ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಐಶ್ವರ್ಯ ಮತ್ತು ಸಂಪತ್ತು ಕರುಣಿಸುತ್ತಾಳೆ.

Related Articles

ಪ್ರತಿಕ್ರಿಯೆ ನೀಡಿ

Latest Articles