26ರಂದು ಚಂಡಿಕಾ ಹೋಮ

ಬೆಂಗಳೂರು: ನವರಾತ್ರಿ ಪ್ರಯುಕ್ತ ಅ.26ರಂದು ಶ್ರೀ ಸುಬ್ರಹ್ಮಣ್ಯ ಮಠ ಹಾಗೂ ಶ್ರೀ ನಾಗಸುಬ್ರಹ್ಮಣ್ಯ ದೇವರ, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವತಿಯಿಂದ ಬೆಂಗಳೂರು ಬಸವನಗುಡಿ ಶಾಖೆಯಲ್ಲಿ ಸಾಮೂಹಿಕ ಚಂಡಿಕಾ ಹೋಮ ನಡೆಯಲಿದೆ.
ಶ್ರೀಲಕ್ಷ್ಮೀ ನರಸಿಂಹ ಹಾಗೂ ನಾಗಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಲಿದೆ.
ಬೆಳಗ್ಗೆ 7.30ರಿಂದ ಚಂಡಿಕಾ ಹೋಮ ಆರಂಭಗೊಳ್ಳಲಿದ್ದು, ಪೂ.11ಗಂಟೆಗೆ ಪೂರ್ಣಾಹುತಿಗೊಳ್ಳಲಿದೆ. ಸೇವೆ ಮಾಡಲಿಚ್ಛಿಸುವವರು ಬಸವನಗುಡಿಯ ಶಾಖಾ ಮಠದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಠದ ವ್ಯವಸ್ಥಾಕ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles