ವೈಕುಂಠ ಏಕಾದಶಿ – ಶ್ರೀ ಸತ್ಯನಾರಾಯಣ ಸ್ವಾಮಿಗೆ ಸುಪ್ರಭಾತ ಸೇವೆ

ಬೆಂಗಳೂರು: ಚಾಮರಾಜಪೇಟೆಯ ಶ್ರೀ ಸತ್ಯನಾರಾಯಣ ಸ್ವಾಮಿ, ಶ್ರೀ ಮಹಾಲಕ್ಷ್ಮಿ ಹಾಗೂ ಮುತ್ತಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 25 ರಂದು ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ಸತ್ಯನಾರಾಯಣ ಸ್ವಾಮಿಗೆ ಬೆಳಗ್ಗೆ 4ಗಂಟೆಗೆ ಸುಪ್ರಭಾತ ಸೇವೆ ಉತ್ಸವಮೂರ್ತಿಗೆ ನಿತ್ಯ ಕೈಂಕರ್ಯಗಳು, ಆರಾಧನೆ, ಅರ್ಚನೆ, ನಿವೇದನೆ, ಮಂತ್ರ ಪುಷ್ಪ, ಪ್ರಾಕಾರ ಉತ್ಸವ ನಡೆಯಲಿದೆ.

ಅಂದು ಬೆಳಗ್ಗೆ 5 ಗಂಟೆಗೆ ಉತ್ತರ ಬಾಗಿಲು (ಸ್ವರ್ಗದ ಬಾಗಿಲು) ತೆರೆಯಲಿದೆ. ಓಂ ಶ್ರೀ ಸತ್ಯನಾರಾಯಣ ಸ್ವಾಮಿ ಮೂಲ ವಿಗ್ರಹಕ್ಕೆ ವಜ್ರಕವಚ ಧಾರಣೆ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಸಂಗೀತ ಇತ್ಯಾದಿ ಕಾರ್ಯಕ್ರಮ, ರಾತ್ರಿ 10.30ಕ್ಕೆ ಏಕಾಂತ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles