ನಾಳೆ ಚಾಂದಿನಿ ಗರ್ತಿಕೆರೆ ಅವರಿಂದ ಗಾಯನ ಕಾರ್ಯಕ್ರಮ

ಬೆಂಗಳೂರು: ಬಳೇಪೇಟೆ ಶ್ರೀ ಲಾಲ್ ದಾಸ್ ಭಕ್ತ ಅಂಜನೇಯ ಸ್ವಾಮಿ ಭಜನೆ ಮಂಡಳಿ ನಡೆಸುತ್ತಿರುವ ಧನುರ್ಮಾಸ ಸಂಗೀತೋತ್ಸವ ಜನವರಿ 9ರಂದು ಬೆಳಗ್ಗೆ 6 ರಿಂದ 6-45ರವರೆಗೆ ಶ್ರೀ ಲಾಲ್ ದಾಸ್ ಭಕ್ತ ಅಂಜನೇಯಸ್ವಾಮಿ ಭಜನೆ ಮಂಡಳಿ ಅವರಿಂದ ಭಜನೆ.

ನಂತರ 6-45ರಿಂದ 7-30 ರವರೆಗೆ ಶ್ರೀಮತಿ ಚಾಂದಿನಿ ಗರ್ತಿಕೆರೆ ಅವರಿಂದ ಸಂಗೀತ ಕಾರ್ಯಕ್ರಮ. ಪಿಟೀಲುನಲ್ಲಿ ವಿದ್ವಾನ್ ಮೈಸೂರು ಸಂಜೀವ ಕುಮಾರ್, ಮೃದಂಗದಲ್ಲಿ ವಿದ್ವಾನ್ ಮುರಳಿ ಸಹಕರಿಸಲಿದ್ದಾರೆ.



Related Articles

ಪ್ರತಿಕ್ರಿಯೆ ನೀಡಿ

Latest Articles