ಡಾ. ಪಾವಗಡ ಪ್ರಕಾಶರಾವ್ ಅವರಿಂದ ಪ್ರವಚನ

ಮಂಡ್ಯ: ನಾಗಮಂಗಲ ತಾಲ್ಲೂಕು ಬ್ರಾಹ್ಮಣ ಸಮಾಜವು ಸತ್ಯದರ್ಶನ ಖ್ಯಾತಿಯ ಅಧ್ಯಾತ್ಮ ಚಿಂತಕ ಡಾ. ಪಾವಗಡ ಪ್ರಕಾಶ ರಾವ್ ಅವರಿಂದ ‘ಆಚಾರ್ಯತ್ರಯ ಸಿದ್ಧಾಂತ ದರ್ಶನ’ ಎಂಬ ವಿಷಯದ ಕುರಿತು ಜ.31 ರಂದು ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ನಾಗಮಂಗಲದ ಬ್ರಾಹ್ಮಣ ಸಮಾಜ ಕಲ್ಯಾಣ ಮಂದಿರದಲ್ಲಿ ಪ್ರವಚನ ಏರ್ಪಡಿಸಿದೆ.
ಇದೇ ಸಂದರ್ಭ ಡಾ. ಪಾವಗಡ ಪ್ರಕಾಶ್ ರಾವ್ ವಿರಚಿತ ‘ಭಾವಪ್ರಕಾಶ’ ಪುಸ್ತಕ ಲೋಕಾರ್ಪಣೆ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಾಲ್ಲೂಕು ಬ್ರಾಹ್ಮಣ ಸಮಾಜದ ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles