ದೇವಸ್ಥಾನಕ್ಕೆ ಹೋದಾಗ ಅಲ್ಲಿ ದೇವರ ದರ್ಶನ ಹೇಗೆ ಮಾಡಬೇಕು?

ಯಾವುದಾದರೂ ಯಾತ್ರೆ ಅಥವಾ ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡೆಯಬೇಕು? ಅನ್ನುವುದಕ್ಕೆ ನಮ್ಮ ಪೂರ್ವಜರು ಸರಿಯಾದ ಕ್ರಮವನ್ನು ತಿಳಿಸಿರುತ್ತಾರೆ. ಅದರಂತೆ ನಡೆದರೆ ನಮಗೆ ಖಂಡಿತ ದರ್ಶನ ಫಲ ಸಿಗುತ್ತೆ.

ಯಾವುದೇ ಯಾತ್ರೆಗೆ ಹೋದಾಗ ಯಾತ್ರಾರ್ಥಿಯು ದೇವರ ಪ್ರಥಮ ದರ್ಶನ ಸಮಯದಲ್ಲಿ ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ಕೈಮುಗಿದು ಹೀಗೆ ಹೇಳಬೇಕು. “ನೂರು ಕೋಟಿ ತೀರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, ತಾರಕ ಬ್ರಹ್ಮ ದೇವರಿಂದ ತತ್ವ ಉಪದೇಶ ಮಾಡಿಸು, ವೈಕುಂಠಕ್ಕೆ ಕರೆದೋಯ್ದು ನಿನ್ನ ದರುಶನ ಮಾಡಿಸು” ಎಂದು ಪ್ರಾರ್ಥಿಸಿ ನಂತರ ಹೊರಗಿನಿಂದಲೇ ದೇವರ ದರ್ಶನ ಮಾಡಬೇಕು. ಅದಕ್ಕೆ ಧೂಳಿದರ್ಶನ ಅಂತಾರೆ.

“ಧೂಳಿ ದರ್ಶನಂ ಪಾಪ ನಾಶನಂ’. ಧೂಳಿದರ್ಶನದಿಂದ ಪಾಪ ನಾಶವಾಗುತ್ತದೆ. ನಂತರ ತಲೆಯಲ್ಲಿರುವ ಚಿಂತೆಗಳನ್ನೆಲ್ಲ ಬಿಟ್ಟು ಶಿಖರ ದರ್ಶನ ಮಾಡಬೇಕು. “ಶಿಖರ ದರ್ಶನಂ ಚಿಂತಾ ನಾಶನಂ’.

ನಂತರ ದೇವಸ್ಥಾನ ಒಳಗೆ ಹೋಗುವಾಗ ಕೈಕಾಲುಗಳನ್ನು ತೊಳೆದು ದೇವಸ್ಥಾನ ಒಳಗಡೆ ಪ್ರವೇಶಮಾಡಿ ತಕ್ಷಣ ದೇವರ ವಿಗ್ರಹವನ್ನು ನೋಡ ಬೇಡಿ. ಅದಕ್ಕೂ ಒಂದು ಕ್ರಮವಿದೆ. ಮೊದಲು ಪಾದ ದರ್ಶನ ಮಾಡಿ, “ಪಾದ ದರ್ಶನಂ ಪಾಪನಾಶನಂ’‌. ನಂತರ ಕಟಿ ದರ್ಶನ “ಕಟಿ ದರ್ಶನಂ ಕಾಮನಾಶನಂ’. ನಂತರ ನಾಭಿ ದರ್ಶನ “ನಾಭಿ ದರ್ಶನಂ ನರಕ ನಾಶನಂ’. ನಂತರ ಕಂಠ ದರ್ಶನ “ಕಂಠ ದರ್ಶನಂ ವೈಕುಂಠ ಸಾಧನಂ’. ನಂತರ ಮುಖ ದರ್ಶನ “ಮುಖ ದರ್ಶನಂ ಮುಕ್ತಿ ಸಾಧನಂ’. ನಂತರ ಕಿರೀಟ ದರ್ಶನ, “ಕೀರಿಟ ದರ್ಶನಂ ಪುನರ್ಜನ್ಮ ನಾಶನಂ’. ನಂತರ ಸರ್ವ ದರ್ಶನ “ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ’. ಈ ರೀತಿಯಾಗಿ ದೇವರ ದರ್ಶನ ಮಾಡಬೇಕು ಎಂಬುದು ಹಿರಿಯರ ಮಾರ್ಗದರ್ಶನ.

(ಸಂಗ್ರಹ: ಎಚ್.ಎಸ್.ರಂಗರಾಜನ್ ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ ಹುಸ್ಕೂರು, ಬೆಂಗಳೂರು)

Related Articles

ಪ್ರತಿಕ್ರಿಯೆ ನೀಡಿ

Latest Articles