ಫೆ.4ರಂದು ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

ಮೈಸೂರು: ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನವಾನ್ನು ಫೆ.4ರಂದು ಆಚರಿಸಲಾಗುತ್ತಿದೆ.
ಈ ಪ್ರಯುಕ್ತ ಶ್ರೀ ಮಠದಲ್ಲಿ ಬೆಳಗ್ಗೆ 5.15 ರಿಂದ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ರುದ್ರಪ್ರಶ್ನ, ಶ್ರೀ ವಿವೇಕಾನಂದ ಪ್ರಭಾತಪ್ರಾಂಜಲಿಃ, ಮಂಗಳಾರತಿ, ವಿಶೇಷ ಪೂಜೆ, ಶಿವಸಹಸ್ರನಾಮ ಪಾರಾಯಣ, ಭಜನೆ, ಸ್ವಾಮಿ ವಿವೇಕಾನಂದ ಕೃತಿಶ್ರೇಣಿಯಿಂದ ಗ್ರಂಥವಾಷನ, ಆರತಿ, ಹೋಮ ನಡೆಯಲಿದೆ.
ಸಂಜೆ ೪.೩೦ರಿಂದ ಭಜನೆ, ವೇದಮಂತ್ರಗಳ ಪಠಣೆ, ಪ್ರವಚನ, ಆರತಿ ಮತ್ತು ವಿಶೇಷ ಭಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಠದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಇಲ್ಲಿನ ಶ್ರೀ ರಾಮಕೃಷ್ಣ ಮಠದಲ್ಲಿ ಸ್ವಾಮಿ ವಿವೇಕಾನಂದ ಅವರ ಆಚರಣೆ ನಡೆಯಲಿದ್ದು, ಬೆಳಗ್ಗೆ 8ರಿಂದ ವಿಶೇಷ ಪೂಜೆ, ವೇದ ಘೋಷ, ಭಜನೆ, ಹೋಮ, ಪ್ರವಚನ, ಪ್ರಸಾದ ವಿತರಣೆ, ಸಂಜೆ 6.30 ರಿಂದ ಸಂಧ್ಯಾರತಿ ಮತ್ತು ಭಜನೆ ಕಾರ್ಯಕ್ರಮ ಇರಲಿದೆ ಎಂದು ಮಠದ ಅಧ್ಯಕ್ಷ ಸ್ವಾಮಿ ಜಿತಾಕಾಮಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles