ನೆಮ್ಮದಿಯ ಜೀವನಕ್ಕೆ ವಾಸ್ತು

ಮನೆ ಪ್ರತಿಯೊಬ್ಬರಿಗೂ ಆಶ್ರಯ ತಾಣ. ಆ ಮನೆ ನೆಮ್ಮದಿಯ ಗೂಡಾಗಿರಬೇಕು ಎಂಬುದು ಎಲ್ಲರ ಕನಸು. ಆ ಕನಸು ನನಸಾಗೋದು ಮನಸು ಮನಸುಗಳ ನಡುವೆ ಹೊಂದಾಣಿಕೆ ಇದ್ದಾಗ ಮಾತ್ರ. ಆದರೆ ಕೆಲವೊಮ್ಮೆ ಸುಂದರ ಮನೆ ಇದ್ದರೂ ಅಲ್ಲಿ ನೆಮ್ಮದಿ ಎಂಬುದು ಮರೀಚಿಕೆಯಾಗಿರುತ್ತದೆ.
ನಮ್ಮ ನಂಬಿಕೆಗಳು, ಸಂಪ್ರದಾಯಗಳು, ನಡೆದು ಬಂದ ಆಚರಣೆಗಳು ನಂಬಿಕಸ್ಥರಿಗೆ ನೆಮ್ಮದಿಯ ತಾಣವಾಗಿಸಿಕೊಳ್ಳಲು ಕೆಲವೊಂದು ಸಲಹೆಗಳನ್ನು ನೀಡುತ್ತದೆ. ಅದನ್ನು ಅನುಸರಿಸಿ ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳುವವರಿಗೆ ಕೆಲವೊಂದು ಸಲಹೆಗಳು ಇಲ್ಲಿವೆ.

*ನೇಮ್ ಪ್ಲೇಟ್: ಮನೆಯ ಮುಖ್ಯ ದ್ವಾರದ ಹೊರ ಬದಿಯಲ್ಲಿ ನೇಮ್ ಪ್ಲೇಟ್ ಇರಬೇಕು. ಇದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಮತ್ತು ಉತ್ತಮ ಅವಕಾಶಗಳು ಮಾಲೀಕರಿಗೆ ಲಭ್ಯವಾಗುತ್ತದೆ ಎಂದು ವಾಸ್ತು ನಿಯಮ ಹೇಳುತ್ತದೆ.

*ದೀಪ ಹಚ್ಚಿ: ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ, ಹಣತೆ ಮತ್ತು ಅಗರಬತ್ತಿ ಹಚ್ಚಬೇಕು. ಇದು ನೆಗೆಟಿವ್ ಎನರ್ಜಿಯನ್ನು ಮನೆಯಿಂದ ಹೊರ ದೂಡಲು ನೆರವು ನೀಡುತ್ತದೆ.

*ಅಡುಗೆ ಮನೆ: ಮನೆಯ ಆಗ್ನೇಯ ಮೂಲೆಯಲ್ಲಿ ಅಡುಗೆ ಮನೆ ಇರಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ವಾಯುವ್ಯ ಭಾಗವನ್ನು ಆರಿಸಿಕೊಳ್ಳಬಹುದು. ಆದರೆ ಸ್ಟೌವ್ ಮಾತ್ರ ಆಗ್ನೇಯ ದಿಕ್ಕಿನಲ್ಲಿರಲಿ.

ಲಿಂಬೆಯ ಶಕ್ತಿ: ಲಿಂಬೆ ಹಣ್ಣಿಗೆ ನೆಗೆಟಿವ್ ಎನರ್ಜಿಯನ್ನು ಓಡಿಸುವ ಶಕ್ತಿಯಿದೆ. ಹೀಗಾಗಿ ಯಾವಾಗಲೂ ಮನೆಯಲ್ಲಿ ಒಂದು ಗ್ಲಾಸ್ ನೀರಿನಲ್ಲಿ ಲಿಂಬೆಯನ್ನು ಹಾಕಿಟ್ಟು, ಪ್ರತಿ ಶನಿವಾರ ಅದನ್ನು ಬದಲಾಯಿಸಿ.

ಔಷಧ ಸಾಮಗ್ರಿ: ಅಡುಗೆ ಮನೆಯಲ್ಲಿ ಔಷಧಗಳನ್ನು ಇಡಲೇ ಬಾರದು. ಯಾಕೆಂದರೆ ಔಷಧ ಕೂಡ ಕೆಟ್ಟ ದೃಷ್ಟಿಯ ಸಂಕೇತ. ಹೀಗಾಗಿ ಆರೋಗ್ಯಕರ ಜೀವನಕ್ಕೆ ಅಡುಗೆ ಮನೆಯಲ್ಲಿ ಇವುಗಳನ್ನು ಇಡಲೇ ಬಾರದು.

ಧ್ಯಾನಕ್ಕೆ ಒತ್ತು: ಮೈ ಮನಸ್ಸನ್ನು ಶುದ್ಧಗೊಳಿಸುವ ಸಾಮರ್ಥ್ಯ ಧ್ಯಾನಕ್ಕೆ ಇದೆ. ಹೀಗಾಗಿ ಪ್ರತಿ ದಿನ 15ರಿಂದ 20 ನಿಮಿಷ ಧ್ಯಾನ ಮಾಡಿ. ಇದು ಮನಸ್ಸನ್ನು ಹಗುರಗೊಳಿಸುತ್ತದೆ. ಸುತ್ತಲು ಪಾಸೆಟಿವ್ ಎನರ್ಜಿಯನ್ನು ತುಂಬಲು ನೆರವಾಗುತ್ತದೆ.

ಕನ್ನಡಿ ಬಳಕೆ: ಬೆಡ್ ರೂಂನಲ್ಲಿ ಕನ್ನಡಿ ಇರಬಾರದು. ಒಂದು ವೇಳೆ ಈಗಾಗಲೇ ಡ್ರೆಸ್ಸಿಂಗ್ ಟೇಬಲ್ ಅಥವಾ ವಾರ್ಡ್ರೋಬ್ನಲ್ಲಿ ಕನ್ನಡಿ ಇದ್ದರೆ ಅದನ್ನು ಮಲಗುವ ಸಮಯದಲ್ಲಿ ಕರ್ಟನ್ನಿಂದ ಮುಚ್ಚಬೇಕು.

ಪವಿತ್ರ ತೀರ್ಥ: ಮನೆಯ ಬಳಕೆ ಮಾಡದ ಮೂಲೆಯಲ್ಲಿ ಯಾವಾಗಲೂ ಗಂಗಾ ಜಲ ಇಡಬೇಕು. ಇದನ್ನು ಪ್ರತಿ ವಾರ ಬದಲಾಯಿಸಬೇಕು. ಇದು ಪಾಸಿಟಿವ್ ಎನರ್ಜಿ ಮನೆಯಲ್ಲಿ ತುಂಬಲು ಸಹಾಯ ಮಾಡುತ್ತದೆ.

ಸ್ವಸ್ತಿಕ್ ಇರಲಿ: ಸ್ವಸ್ತಿಕ ಚಿಹ್ನೆಯು ಸಂಪತ್ತು ಮತ್ತು ಶ್ರೇಯಸ್ಸಿನ ಸಂಕೇತ. ಆದ್ದರಿಂದ ಮನೆಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರ. ಯಾವಾಗಲೂ ಮನೆಯ ಹೊರ ಬಾಗಿಲ ಹೊರಗಡೆ ಇದನ್ನು ಅಳವಡಿಸಿ.

ಕಿರು ಘಂಟೆಗೆ ಆದ್ಯತೆ: ಮನೆಯಲ್ಲಿ ಕಿರು ಘಂಟೆಗಳನ್ನು ಅಲ್ಲಲ್ಲಿ ತೂಗು ಹಾಕಿ. ಅದರಲ್ಲೂ ದೇವರ ಕೋಣೆಯ ಬಾಗಿಲಿಗೆ ಹಾಕಿದರೆ ಉತ್ತಮ. ಇದರ ನಾದದಿಂದ ನೆಗೆಟಿವ್ ಎನರ್ಜಿ ಮನೆಯಿಂದ ಹೊರಗೆ ಹೋಗುತ್ತದೆ.

ಉಪ್ಪಿನ ಬಳಕೆ: ಉಪ್ಪು ನೆಗೆಟಿವ್ ಎನರ್ಜಿಯನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮನೆಯ ಮೂಲೆಗಳಲ್ಲಿ ಚಿಕ್ಕ ಬೌಲ್ನಲ್ಲಿ ಉಪ್ಪು ಹಾಕಿಡಬೇಕು.

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles