ಒಪ್ಪಂದ

ಗಂಧರ್ವರಿಗಿಲ್ಲ ಇದರ ಗೊಡವೆ ಹುಲು ಮನುಜರು ಅಹಲ್ಯಾ ಶಿಲೆ 

ಸಮ್ಮತಿ ನೀಡಿದೊಡೆ ಮತಿ ನೀಗುವ ದುಗುಡ ದುಮ್ಮಾನಗಳ ಬಲೆ 

ಬಿಡುಗಡೆಯಿಲ್ಲ ಎಂಥವನಾದರೂ ನರ ಅಸುರ ಸುರ ದೇವೇಂದ್ರ

ಸ್ವಾತಂತ್ರ್ಯತೆಯಿಂದ ಬೀಗುವನು ಯುಗ ಪುರುಷ ನರೇಂದ್ರ


ಮದನ ಶರಾವಳಿ ದಾಳಿ ಅಟ್ಟಹಾಸ ಪಂಚೇಂದ್ರಿಯಗಳ ಮಂದಹಾಸ 

ಉಚ್ಚ ನೀಚ ಇದ್ದವರು ಇಲ್ಲದವರಿಗೂ ಜಗವೆಲ್ಲ ಸುಂದರ ಸ್ವಪ್ನವಿಲಾಸ

ಹೆಳವನಿಗೆ ಹೆಮ್ಮಿನ ಹೆಗಲು ನೀಡಿ  ಕುರುಡನಿಗೆ ಕನಸ ತೀಡಿ 

ಸಾಗುವದು ನೆನಪಿನಾ  ಮೆರವಣಿಗೆ ಜ್ಞಾನಿಗಳಿಗೂ ಬಯಕೆಯ ಬೇಡಿ 


ಮಮತೆಯ ಮಡಿಲನು ದೂಡಿ ಹೊಸ ಒಲವಿನೆಡೆಗೆ ಓಡಿ 

ಪ್ರಾಯದ ಪಾಯ ಕುಸಿದು ನಂದಿ ಹೋಗಿರೆ ವ್ಯಕ್ತಿತ್ವದ ಕಿಡಿ

ಜವಾಬ್ದಾರಿಯ ಸಂಕೋಲೆ ಬೇಕು ಬೇಕುಗಳ ಸರಮಾಲೆ 

ಇದಕ್ಕೇನು ಅರ್ಥ ಅಗತ್ಯವೇ ಈ ಸಾಮಾಜಿಕ ಕಟ್ಟಲೆ ?  

* ರವಿ ಕಲ್ಮಠ , ನಾರ್ಥ್ ಕರೋಲಿನಾ, ಅಮೇರಿಕಾ
* ರವಿ ಕಲ್ಮಠ , ನಾರ್ಥ್ ಕರೋಲಿನಾ, ಅಮೇರಿಕಾ

Related Articles

ಪ್ರತಿಕ್ರಿಯೆ ನೀಡಿ

Latest Articles