ಶ್ರೀ ಗುರುರಾಯರ ಸನ್ನಿಧಿಯಲ್ಲಿ ನಿತ್ಯಪೂಜೆ

ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಸಂಕಲ್ಪದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಕರೋನ ಮಹಾಮಾರಿ ಸೋಂಕು ಶೀಘ್ರ ನಿವಾರಣೆಯಾಗಲಿ ಎಂದು ಗುರುವಾರ ಚಾಮರ ಸೇವೆ, ಹೂವಿನ ಅಲಂಕಾರ, ತೊಟ್ಟಿಲ ಪೂಜಾ, ಪಲ್ಲಕ್ಕಿಯೊಂದಿಗೆ ನಿತ್ಯ ಪೂಜಾ ವಿಧಿವಿಧಾನಗಳು ನಡೆದವು.

ಆದರೆ ಈ ಸಂದರ್ಭದಲ್ಲಿ ಸರ್ಕಾರದ ನಿಯಮದಂತೆ ಶ್ರೀಮಠಕ್ಕೆ ಭಕ್ತಾದಿಗಳಿಗೆ ಅವಕಾಶ ಇರುವುದಿಲ್ಲ ಭಕ್ತಾದಿಗಳ ಹೆಸರಿನಲ್ಲಿ ಹಾಗೂ ಲೋಕಕಲ್ಯಾಣಕ್ಕಾಗಿ ಪೂಜಾದಿಗಳು ನೆರವೇರುತ್ತಿವೆ ಎಂದು ಕಿಶೋರ್ ಆಚಾರ್ಯ ತಿಳಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles