ತೇಜಸ್ಸು

✍️ಅಮರ್ಜಾ
 ಅಮರೇಗೌಡ ಪಾಟೀಲ ಜಾಲಿಹಾಳ
ಬು.ಬ.ನಗರ, ಕುಷ್ಟಗಿ


ಮಾಡಿದ್ದು ಪ್ರಖರ
ಮಹೋನ್ನತ ಕಾರ್ಯ
ಹೋದ ಜೀವ ಬರುವದಿಲ್ಲ ಬಿಡಿ
ಅದೆಷ್ಟೋ ಜೀವಗಳಿಗೆ ನೀನಾದೆ ತೇಜ.

ಅಗೋ ಆ ಭಂಡರೋ 
ಮತಾವಲಂಬಿ ಠಕ್ಕರೋ
ಆಗಲೇ ಅವರ ನಾಲಿಗೆಯೋ
ಕೆನ್ನಾಲಿಗೆಯಾಗಿ ದೌಡಾಯಿಸುತ್ತಿವೆ
ನಿನ್ನ ತೇಜಸ್ಸಿಗೆ
ಲಂಡರ ಅಂಡಿಗೆ ಉರಿಯಾಗಿ.

ಅಲ್ಲಿರುವವರೆಲ್ಲರ ದೋಸೆ ತೂತುಗಳೇ
ಮಿಲಾಪಿ ಕುಸ್ತಿಯವರೇ
ಪಗಡೆ ಆಟವೂ ಅಲ್ಲಡಗಿದೆ !
ಲಫಂಗ-ಡಕಾಯಿತ-ಅನಕ್ಷರಸ್ತ ಪಡೆಯೇ
ಹರಿಯಾಯಲು 
ದೀಪದ ಬೆಳಕಿಗೆ ಕಾಡಿಗೆ ಕಾರಣ !!

ನಿನ್ನ ದೇಶಾಭಿಮಾನ ಬೆಳಗಲಿ
ನಿನ್ನ ಪ್ರದೇಶಾಭಿಮಾನ ಬೆಳಗಲಿ
ನಿನ್ನ ಸ್ವಾಭಿಮಾನ ಬೆಳಗಲಿ
ನಿನ್ನ  ಸೇವೆ ಪ್ರಜ್ವಲಿಸಲಿ
ಪುಂಡು-ಪೋಕರಿಗಳ ಮಧ್ಶ
ತೇಜಸ್ವಿನಿ ಸೂರ್ಯ
ನೊಂದವರಿಗೆ ಬೆಳಕಾಗಲಿ!!

                                               

Related Articles

ಪ್ರತಿಕ್ರಿಯೆ ನೀಡಿ

Latest Articles