ಶ್ರೀಪಾದರಾಜ ಮಠಕ್ಕೆ ನೂತನ ಉತ್ತರಾಧಿಕಾರಿ

ಕೋಲಾರ: ಇಲ್ಲಿನ ಶ್ರೀಪಾದರಾಜ ಮಠದ ನೂತನ ಉತ್ತರಾಧಿಕಾರಿಯಾಗಿ ಎಚ್.ಬಿ ಜಯರಾಜಾಚಾರ್ ನೇಮಕಗೊ0ಡಿದ್ದಾರೆ.
ಮಠದ ಶ್ರೀ ಕೇಶವ ನಿಧಿ ತೀರ್ಥರು ಮೇ 20 ರಂದು ಉತ್ತರಾಧಿಕಾರಿಯನ್ನು ನೇಮಕ ಮಾಡಿ ಅಧಿಕೃತವಾಗಿ ಘೋಷಿಸಿದರು.
ಮಠದ ಅಭಿವೃದ್ಧಿ ಹಾಗೂ ವಯೋಸಹಜ ಅಸಹಾಯಕತೆಯಿಂದ ಮಠದ ದೈನಂದಿನ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಲು ಶ್ರೀಮಠದ ಶಿಷ್ಯವೃಂದ ಹಾಗೂ ಭಕ್ತರೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಂಡಿರುವುದಾಗಿ ಶ್ರೀಗಳು ತಿಳಿಸಿದ್ದಾರೆ. ನೂತನ ಉತ್ತರಾಧಿಕಾರಿಯಾಗಿರುವ ಶ್ರೀ ಜಯರಾಜಾಚಾರ್ ಮುಳಬಾಗಿಲಿನ ಅಗ್ರಹಾರ ನಿವಾಸಿ. ಪ್ರಸ್ತುತ ಶ್ರೀಮಠದ ದಿವಾನರಾಗಿದ್ದರು.


ಆಶ್ರಮ ಸ್ವೀಕಾರ ಕಾರ್ಯಕ್ರಮ

ಶ್ರೀಮಠದ ನೂತನ ಉತ್ತರಾಧಿಕಾರಿ ಅವರ ಆಶ್ರಮ ಸ್ವೀಕಾರ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳು ಮೇ 21, 22ರಂದು ನಡೆಯಲಿದೆ ಎಂದು ಶ್ರೀ ಕೇಶವನಿಧಿ ತೀರ್ಥರು ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles