ಈ ದೇವಸ್ಥಾನಗಳಿಗೆ ಶ್ರಾವಣ ಶನಿವಾರ, ಭಾನುವಾರ, ಸರ್ಕಾರಿ ರಜಾದಿನ ಪ್ರವೇಶ ನಿರ್ಬಂಧ

ಮೇಲುಕೋಟೆ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯಗಳಿಗೆ ಆ.7 ಮತ್ತು 8 ಸೇರಿದಂತೆ ಎಲ್ಲ ಶ್ರಾವಣ ಶನಿವಾರ ಮತ್ತು ಭಾನುವಾರ ಹಾಗೂ ಸರ್ಕಾರಿ ರಜಾದಿನಗಳಂದು ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ತಿಳಿಸಿದ್ದಾರೆ.
ಶ್ರಾವಣಮಾಸದ ಶನಿವಾರ ಮತ್ತು ಭಾನುವಾರ ರಾಜ್ಯದ ವಿವಿಧ ಭಾಗಗಳ ಚೆಲುವನಾರಾಯಣಸ್ವಾಮಿಯ ಒಕ್ಕಲಿನ ಭಕ್ತರು ಬರುವ ಸಂಪ್ರದಾಯವಿದೆ. ಕೊರೊನಾ 3ನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶ ಸ್ಥಳೀಯ ನಾಗರಿಕರಿಗೂ ಅನ್ವಯವಾಗಲಿದೆ. ಆದರೆ, ದೇವಾಲಯದಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Related Articles

3 COMMENTS

  1. ಒಳ್ಳೆಯ ಸುದ್ದೀನೆ.ಈ ಕೊರೋನಾ ರಾಕ್ಷಸನ ಹಾವಳಿ ಎಂದಿಗೆ‌ ಮುಗಿಯುವುದೋ !!?? ಇದು ಎಂತಹ‌ ಹೆಮ್ಮಾರಿ.ಪ್ರಾರ್ಥನೆ ಗಳಿಂದಲೇ ಗೊಂದಲ ಮುಗಿಯ ಬೇಕು.ಸೆಳ್ವಪಿಳ್ಳೈಸ್ವಾಮಿಯ ಅನುಗ್ರಹ ಯಾವಾಗಲೂ ಇರಲೆಂದು‌ ಬೇಡುವ.

ಪ್ರತಿಕ್ರಿಯೆ ನೀಡಿ

Latest Articles