ರಕ್ಷಾಬಂಧನ

ದೇವದಾನವರ ಸೆಣದಾಟವು
 ಪ್ರಾರಂಭವಾಯಿತು
ಇಂದ್ರಾಣಿ ಇಂದ್ರನಿಗೆ ಕಟ್ಟಿದ ನೂಲು
ಗೆಲುವಿಗೆ ಸಾಕ್ಷಿಯಾಯಿತು

ಸಂಭಂದಗಳಿ ಶ್ರೇಷ್ಠತೆ ಸಾರುವುದು
ಅಣ್ಣತಂಗಿ ಸಂಬಂಧ
ಭಾವನೆಗಳ ಬೆಸುಗೆಯ ಸುಂದರ ಅನುಬಂಧ

ಅಣ್ಣನಿಗೆ ತಂಗಿಯ‌ ಶುಭಹಾರೈಕೆ ಒಲುಮೆ ಬಂಧನ
ತಂಗಿಗೆ ಅಣ್ಣನ  ಪ್ರೀತಿ ಭದ್ರತೆಯ 
ರಕ್ಷಾಬಂಧನ

ಅಣ್ಣತಂಗಿ ವಾತ್ಸಲ್ಯ ಬಂಧನಕೆ ಸಾಟಿಯಿಲ್ಲ
ಸೃಷ್ಟಿಯಲಿ ಪವಿತ್ರತೆಗೆ ಬೇರೆ ಯಾವ
ಎಣೆಯಿಲ್ಲ.

 *ಪ್ರಿಯಾ ಪ್ರಾಣೇಶ ಹರಿದಾಸ, ಆದರ್ಶ ನಗರ, ವಿಜಯಪುರ.

Related Articles

ಪ್ರತಿಕ್ರಿಯೆ ನೀಡಿ

Latest Articles