ಬೆಂಗಳೂರು ಇಸ್ಕಾನ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, 2 ದಿನ ಭಕ್ತರಿಗಿಲ್ಲ ಪ್ರವೇಶಾವಕಾಶ

ಬೆಂಗಳೂರು: ಇಸ್ಕಾನ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ಆಗಸ್ಟ್ 29, 30ರಂದು ನಡೆಯಲಿದೆ. ಆದರೆ ಭಕ್ತಾದಿಗಳಿಗೆ ಪ್ರವೇಶ ಇಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಜನ್ಮಾಷ್ಟಮಿ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ ಸಾರ್ವಜನಿಕರ ಸುರಕ್ಷತೆ ಹಾಗೂ ಸರಕಾರಿ ನಿಯಮಗಳಂತೆ ಸಾರ್ವಜನಿಕರಿಗೆ ಪ್ರವೇಶಾವಕಾಶ ಇಲ್ಲ. ಆದರೆ ಹಬ್ಬದ ವೇಳಾಪಟ್ಟಿಯ ಪ್ರಕಾರ ಎಲ್ಲ ಸೇವೆಗಳನ್ನೂ ದೇವರಿಗೆ ಅರ್ಪಿಸಲಾಗುವುದು. ಭಕ್ತರು ಆನ್ ಲೈನ್‌ ನಲ್ಲಿ ಭಾಗವಹಿಸಬೇಕೆಂದು ಕೋರಿದೆ.

ಇಸ್ಕಾನ್‌ ಬೆಂಗಳೂರಿನ ಯೂಟ್ಯೂಬ್‌ ಚಾನೆಲ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ದೇವರ ದರ್ಶನ ಮಾಡಬಹುದು. www.iskconbangalore.org

ಹೆಚ್ಚಿನ ಮಾಹಿತಿಗಾಗಿ: ಕುಲಶೇಕರ ಚೈತನ್ಯ ದಾಸ: 9379464312 2.

ಬಾಲಸುಬ್ರಹ್ಮಣ್ಯ: 8123469518

ಇ-ಮೇಲ್ [email protected] ಯನ್ನು ಸಂಪರ್ಕಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles