ಬಸವಣ್ಣ

*ಜ್ಯೋತಿ ಕೋಟಗಿ ಶಿಕ್ಷಕಿ

ಸ ಮಾ ಪ್ರಾ ಶಾಲೆ ತಲ್ಲೂರ

ಮಠ ಮಂದಿರಗಳು ಬೇಡವೆಂದೆ ಬಸವಣ್ಣ
ಕಚ್ಚಾಡುತಿರುವರು ಗಲ್ಲಿಗಳಲಿ ಕಟ್ಟಲೆಂದು
ಮೂರ್ತಿ ಪೂಜೆ ಹೋಮ ಹವನ ಯಾಕೆಂದೆ
ಅವಿಲ್ಲದೇ ಜೀವನ ಪ್ರಾರಂಭವಾಗದಿಂದು ||

ಜಾತಿ ಮತಗಳ ದೂರೀಕರಿಸಲು ಹೋರಾಡಿದೆ
ಜಾತಿ ಹೆಸರ ಹೇಳದೇ ಎನೂ ನಡೆಯದಿಂದು
ಸಮಾನತೆಯ ಸಾರ ತಿಳಿಸುತಲೇ ಪ್ರಾಣ ಬಿಟ್ಟೆ
ಅಸಮಾನತೆಯೇ ತಲೆ ಎತ್ತಿ ನಿಂತಿದೆಯಿಂದು ||

ಕಳವು ಕೊಲೆ ಸುಳ್ಳು ಮೋಸಗಳು ಬೇಡವೆಂದೆ
ಎಲ್ಲವೂ ತಿರುವು ಮುರುವಾಗಿ ಕ್ರೌರ್ಯ ಹೆಚ್ಚಿದೆ
ಸ್ತ್ರೀಯರನು ಗೌರವಿಸಿ ಸಮಾನತೆ ನೀಡಿರೆಂದೆ
ದೊರೆತರೂ ಅದಕಿಂದು ಅರ್ಥವಿಲ್ಲವಾಗಿದೆ ||

ನೀ ಅಂದು ಹೇಳಿದ ಪಾಲಿಸಿದ ಆದರ್ಶಗಳು
ಪುಸ್ತಕಗಳ ಪುಟಗಳಲಿ ಮೂಲೆ ಸೇರಿವೆ ಇಂದು
ಮರಳಿ ನೀ ಬಾ ಭುವಿಗೆ ಕೈ ಮುಗಿದು ಬೇಡುವೆ
ಜಗದಲಿರುವ ಕೊಳೆಯ ತೊಳೆಯಲೆಂದು ||

ಸನ್ಮಾರ್ಗದಿ ನಡೆಸಲು ಬಾರೊ ಹೇ ಬಸವಣ್ಣ
ಕ್ರೌರ್ಯತೆಗಳ ಸರಮಾಲೆ ಕಳಚ ಬೇಕಿದೆಯಣ್ಣ
ಮೊರೆಯಿಡುವೆ ನಾನು ಮಹಾದೇವ ನಿನ್ನಲ್ಲಿ
ಬಸವಣ್ಣ ಬೇಕಿರುವ ಕಳಿಸಿಕೊಡು ನಮ್ಮಲ್ಲಿ ||

Related Articles

ಪ್ರತಿಕ್ರಿಯೆ ನೀಡಿ

Latest Articles