ದಸರಾ ಹಬ್ಬದ ಶುಭಾಶಯ

ನವರಾತ್ರಿ ಕಳೆದು
ನವೋಲ್ಲಾಸ ತಳೆದು
ಸತ್ಯ, ಧರ್ಮಕೆ ಜಯ  ಎಂದೆಂದೂ
ಸಾರುತ   ಬಂದಿದೆ  ದಸರಾ ಇಂದು

ಶ್ರೀರಾಮನಿಂದ ರಾವಣನ ಹರಣ
ಆದಿಶಕ್ತಿಯಿಂದ ರಾಕ್ಷಸರ ಸಂವ್ಹರಣ 
ದುಷ್ಟರ ಸಂಹಾರ, ಶಿಷ್ಟರ ಉದ್ಧಾರ
ಸರ್ವಕಾಲಿಕ ಸತ್ಯ, ಪುರಾಣಗಳೇ  ಇದಕೆ ಆಧಾರ

ಸದಾ ಸಜ್ಜನರ ಸಹವಾಸ
ಬೀರುತ ಮೊಗದಿ ಮಂದಹಾಸ
ತುಂಬಿರಲಿ ಮನದಿ ಪ್ರೀತಿ ವಿಶ್ವಾಸ
ಅರಿತು ನಡೆದೊಡೆ ಬಾಳೇ ಸಂತಸ

ದುಷಕೃತ್ಯಕೆ ಶಿಕ್ಷೆ, ಸತ್ಕಾರ್ಯಕೆ ರಕ್ಷೆ
ಇದುವೇ ವಿಜಯದಶಮಿ ಹಬ್ಬದ ಆಕಾಂಕ್ಷೆ
ಶುಭ ಸಿಂಚನವಾಗಲೆಂಬುದೆನ್ನ ಅಪೇಕ್ಷೆ
ವಿಜಯ ದಶಮಿ ನೀಡಲಿ ಸರ್ವರಿಗೂ ಶ್ರೀರಕ್ಷೆ 

  
ವಿದ್ಯಾ ಅ. ನಾಡಿಗೇರ
ಪಿ. ಆರ್. ಓ,
ಆಯುಕ್ತರ ಕಾರ್ಯಾಲಯ
ಧಾರವಾಡ

Related Articles

3 COMMENTS

  1. ಸ್ವಾಮಿ ಜಪಾ‌ನಂದರ ಸತ್ಸಂಗದ ಆಡಿಯೋ/ವಿಡಿಯೋ ಬರುತ್ತಿಲ್ಲ

    • ಸರ್ ನಮಸ್ತೇ,

      ಸ್ವಾಮಿ ಜಪಾನಂದ ಅವರ ಆಡಿಯೋ ಅಥವಾ ವಿಡಿಯೋಗಳನ್ನು ಬಳಸಿಕೊಳ್ಳುವುದಕ್ಕೆ ಯೂಟ್ಯೂಬ್ ಚಾನೆಲ್ ಆರಂಭಿಸಿಲ್ಲ. ಸದ್ಯದಲ್ಲೇ ಯೂ ಟ್ಯೂಬ್ ಚಾನೆಲ್ ಮಾಡುತ್ತೇನೆ. ಅದರಲ್ಲಿ ಖಂಡಿತಾ ಬಳಸಿಕೊಳ್ಳೋಣ.
      ಖಂಡಿತಾ ಅವರ ಸುದ್ದಿಗಳನ್ನು ಬಳಸಿಕೊಳ್ಳುತ್ತೇನೆ.
      ಧನ್ಯವಾದಗಳು…..

ಪ್ರತಿಕ್ರಿಯೆ ನೀಡಿ

Latest Articles