ರಾಜ್ಯಮಟ್ಟದ ಕವನ ವಾಚನ ಸ್ಪರ್ಧೆ, ಕವಿಗೋಷ್ಠಿ, ಪುಸ್ತಕ ಬಿಡುಗಡೆ

ಬೆಂಗಳೂರು: BTrendz ಸಂಸ್ಥೆ ಮತ್ತು ಅಮೋದ್ ಇನ್ಫೋ ಮೀಡಿಯಾ ಸಂಯುಕ್ತಾಶ್ರಯದಲ್ಲಿ ದಿನಾಂಕ 05-12-2021 ರಂದು ಬೆಂಗಳೂರಿನ, ಬಸವನಗುಸಡಿಯಲ್ಲಿ ನಡೆದ ರಾಜ್ಯಮಟ್ಟದ ಕವನ ವಾಚನ ಸ್ಪರ್ಧೆ ಮತ್ತು ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮಹಿಳಾ ಉದ್ಯಮಿ ರಮ್ಯಾ ಕೃಷ್ಣಪ್ರಸಾದ್ ಹಾಗು ಜಯರಾಜ್ ಕುಲಕರ್ಣಿ (ದಾಸವಾಣಿ ಹರಿ) ಅವರು ದೀಪಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಬರಹಗಾರಾದ ಜಯರಾಮ್ ಫಣಿಯಾಡಿ, ರಮೇಶ್ ಎ ಎನ್, ಕವಯಿತ್ರಿ ಆಶಾ ಮಯ್ಯ, ಸೃಜನಶೀಲ ಬರಹಗಾರಾದ ಬಾಹುಬಲಿ ಜಯರಾಜ್ ಅವರು ಕವಿಗೋಷ್ಠಿಗೆ ಚಾಲನೆಗೆ ನೀಡಿದರು.

ಹಿರಿಯ ರಂಗ ಕರ್ಮಿ, ಚಲನಚಿತ್ರ ನಟ ಶ್ರೀನಿವಾಸ್ ಪ್ರಭು ಅವರು ಪುಸ್ತಕ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಲೇಖಕರಾದ ಸತ್ಯೇಶ್ ಬೆಳ್ಳೂರು, ಕಥಾಗುಚ್ಛ ಸಂಘಟಕರಾದ ಗಿರೀಶ್ ಕುಲ್ಕರ್ಣಿ, ಪ್ರತಿಲಿಪಿ ಸಂಪಾದಕರಾದ ಅಕ್ಷಯ್ ಬಾಳೆಗೆರೆ ಮತ್ತು ಯಕ್ಷಗಾನ ಕಲಾವಿದೆ, ಕಿರುತೆರೆ ನಟಿ ನಾಗಶ್ರೀ ಜಿ ಎಸ್ ಅವರು ಉಪಸ್ಥಿತರಿದ್ದರು.

ಶೈನಾ ಶೆಟ್ಟಿ ಹಾಗು ಕುಮಾರಿ ಸ್ವಸ್ತಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನೇಕ ಹಿರಿಯ ಮತ್ತು ಉದಯೋನ್ಮುಖ ಕನ್ನಡ ಸಾಹಿತಿಗಳು ತಮ್ಮ ಕವನ ವಾಚನ ಮಾಡಿದರು.

ಕಾರ್ಯಕ್ರಮದ ಆಯೋಜಕರಾದ BTrendz ಸಂಸ್ಥೆಯ ಹರೀಶ್ ಕುಮಾರ್ ರಾವ್ ಮತ್ತು ಇರ್ಫಾನ್ ಹಾಸನ್ ಕುಟ್ಟಿ ಅವರು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles